ದುಬೈ ಕಾರ್ ರೇಸ್: ಮೂಡುಬಿದಿರೆಯ ಯುವಕನಿದ್ದ ಭಾರತ ತಂಡಕ್ಕೆ ತೃತೀಯ ಸ್ಥಾನ

Update: 2020-09-19 17:17 GMT

ಮೂಡುಬಿದಿರೆ : ದುಬೈನಲ್ಲಿ ನಡೆದ 'ಎಂಡ್ಯುರೆನ್ಸ್ ಚಾಂಪಿಯನ್‍ಶಿಪ್-2020’ ಕಾರ್ ರೇಸ್‍ನಲ್ಲಿ ಮೂಡುಬಿದಿರೆಯ ಯವಕನಿದ್ದ ಭಾರತ ತಂಡ ತೃತೀಯ ಸ್ಥಾನ ಪಡೆದುಕೊಂಡಿದೆ.

ಸೆ.17ರಂದು ದುಬೈನಲ್ಲಿ 6 ಗಂಟೆಗಳ ಕಾಲ ನಡೆದ ಎಂಡ್ಯುರೆನ್ಸ್ ಚಾಂಪಿಯನ್‍ಶಿಪ್ ಕಾರ್ ರೇಸ್‍ನಲ್ಲಿ ಭಾರತ ದೇಶದ ಐವರು ಚಾಲಕರ ನ್ನೊಳಗೊಂಡ ತಂಡ ಭಾಗವಹಿಸಿತ್ತು. ಕೊಲ್ಕತ್ತಾ ಮೂಲದ ಟೀಮ್ ಮ್ಯಾನೇಜರ್ ದೀಪಾಂಜನ್ ಬಿಸ್ವಾಸ್ ನೇತೃತ್ವದ ಐವರು ಚಾಲಕರ ತಂಡದಲ್ಲಿ ಕರ್ನಾಟಕದಿಂದ ಮೂಡುಬಿದಿರೆಯ ಸುಹೈಬ್ ಆಲಿ(24) ಒಬ್ಬರಾಗಿದ್ದರು.

ಸುಹೈದ್ ಆಲಿ ಅವರು ದ. ಕ. ಜಿಲ್ಲಾ ಅಂಬೇಡ್ಕರ್ ಸೇನೆಯ ಅಧ್ಯಕ್ಷ ಎಂ. ಕೆ. ಅಬೂಬಕ್ಕರ್ ಅವರ ಪುತ್ರರಾಗಿದ್ದಾರೆ. ಇವರು ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದು ಕ್ಯಾಂಪಸ್ ಸೆಲೆಕ್ಷನ್ ಮೂಲಕ ಪ್ರಸ್ತುತ ಬೆಂಗಳೂರಿನಲ್ಲಿರುವ ಅಮೇರಿಕನ್ ಮೂಲದ ಬಿಟೆಕ್ನಾಲಜಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News