ಪಡೀಲ್ ಬೈಪಾಸ್ ರೈಲ್ವೆ ಮಾರ್ಗದ ಮೇಲೆ ಗುಡ್ಡ ಜರಿತ

Update: 2020-09-20 16:04 GMT

ಮಂಗಳೂರು, ಸೆ.20: ಭಾರಿ ಮಳೆಯಿಂದಾಗಿ ಪಡೀಲ್ ಬೈಪಾಸ್ ರೈಲ್ವೆ ಮಾರ್ಗದ ಮೇಲೆ ಗುಡ್ಡ ಜರಿದಿದೆ. ಇದರಿಂದಾಗಿ ಹಾಸನ, ಮೈಸೂರು, ಬೆಂಗಳೂರು ಹಾಗೂ ಕೊಂಕಣ ರೈಲ್ವೆ ಮಾರ್ಗದ ಮಧ್ಯೆ ಸಂಚಾರ ಅಸ್ತವ್ಯಸ್ತಗೊಂಡಿದೆ.

ರೈಲುಗಳು ಈಗ ಮಂಗಳೂರು ಜಂಕ್ಷನ್‌ವರೆಗೆ ಹೋಗಿ ಸುತ್ತುವರಿದು ಹೋಗಬೇಕಾಗಿದೆ. ಹಳಿ ದುರಸ್ತಿ ಕಾರ್ಯ ಭರದಿಂದ ಸಾಗಿದೆ. ದುರಸ್ತಿ ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಬೆಂಗಳೂರು- ಕಾರವಾರ ಮತ್ತು ಬೆಂಗಳೂರು ಎಕ್‌ಸ್‌ಪ್ರೆಸ್ ವಿಶೇಷ (06585/06586) ರೈಲುಗಳು ಈ ಮಾರ್ಗದಲ್ಲಿ ಸಂಚರಿಸಲಿವೆ. ಇತರ ಯಾವುದೇ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿಲ್ಲ ಎಂದು ರೈಲ್ವೆ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News