ಪವರ್ ಪ್ರಾಜೆಕ್ಟ್‌ನೊಳಗೆ ಸಿಲುಕಿದ್ದ ಇಬ್ಬರ ರಕ್ಷಣೆ

Update: 2020-09-20 16:54 GMT

ಹಿರಿಯಡ್ಕ, ಸೆ.20: ಸ್ವರ್ಣ ನದಿಯ ಬಜೆ ಡ್ಯಾಂ ಸಮೀಪದಲ್ಲಿರುವ ದೇವರ ಪವರ್ ಪ್ರಾಜೆಕ್ಟ್‌ನಲ್ಲಿ ಮಳೆ ಪ್ರವಾಹದಿಂದ ಸಿಲುಕಿಕೊಂಡಿದ್ದ ಇಬ್ಬರನ್ನು ರಕ್ಷಿಸಲಾಗಿದೆ.

ಮಲ್ಪೆಯ ವಿನಯ ಕರ್ಕೇರ ನೇತೃತ್ವದ ಈಜು ತಜ್ಞರು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಸುಮಾರು ಮೂರು ತಾಸುಗಳ ಕಾರ್ಯಾಚರಣೆ ಪ್ರಾಜೆಕ್ಟ್‌ನೊಳಗೆ ಸಿಲುಕಿದ ಇಬ್ಬರನ್ನು ಸುರಕ್ಷಿತವಾಗಿ ಕರೆ ತರಲಾಗಿದೆ. ಪ್ರವಾಹ ದಿಂದ ಪ್ರಾಜೆಕ್ಟ್‌ಗೆ ಸುಮಾರು 60ಕೋಟಿ ರೂ. ನ್ಟ ಉಂಟಾಗಿರುವುದಾಗಿ ಅಂದಾಜಿಸಲಾಗಿದೆ.

ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಬೊಮ್ಮಾರಬೆಟ್ಟು ಪಂಚಾ ಯತ್ ಗ್ರಾಮ ಲೆಕ್ಕಾಧಿಕಾರಿ ಗಜೇಂದ್ರ ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News