ಮಣಿಪಾಲ: ಕುಂಡೇಲುಕಾಡು ಗುಡ್ಡ ಜರಿತ ; ಅಪಾಯದಲ್ಲಿ ಬಹುಮಹಡಿ ಕಟ್ಟಡ
Update: 2020-09-21 12:48 GMT
ಉಡುಪಿ : ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಅಬ್ಬರಿಸುತ್ತಿರುವ ಭಾರೀ ಮಳೆಯ ಪರಿಣಾಮ ಮಣಿಪಾಲದ ಕುಂಡೇಲುಕಾಡಿನ ಗುಡ್ಡ ಜರಿದಿದ್ದು, ಅಲ್ಲೇ ಸಮೀಪದಲ್ಲಿರುವ ಬಹುಮಹಡಿ ಕಟ್ಟಡವೊಂದು ಅಪಾಯದ ಸ್ಥಿತಿಯಲ್ಲಿದೆ.
ಸಂಜೆ ನಾಲ್ಕು ಗಂಟೆ ಸುಮಾರಿಗೆ ಬಹುಮಹಡಿ ಕಟ್ಟಡದ ಕೆಳಗಿನ ಗುಡ್ಡ ಮೋರಿ ಸಹಿತ ಜರಿದು ಬಿದ್ದಿದೆ. ತಕ್ಷಣವೇ ಕಾರ್ಯಾಪ್ರವೃತ್ತರಾದ ಸ್ಥಳೀಯಾಡಳಿತ ಹಾಗೂ ಪೊಲೀಸರು ಕಟ್ಟಡದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯ ವಾಹನ ಸಂಚಾರವನ್ನು ನಿರ್ಬಂಧಿಸಿದ್ದಾರೆ.
ವಸತಿ ಸಮುಚ್ಛಯದ ನಿವಾಸಿಗಳ ಸ್ಥಳಾಂತರಗೊಳಿಸುವಂತೆ ನಗರಸಭೆಯ ಪೌರಾಯುಕ್ತ ಆನಂದ ಕಲ್ಲೊಲ್ಕರ್ ಕಟ್ಟಡ ಮಾಲಕರಿಗೆ ಸೂಚನೆ ನೀಡಿದ್ದಾರೆ