ಎಸ್ ಡಿ ಪಿ ಐ ಸೂರಿಂಜೆ ವತಿಯಿಂದ ಅಯುಷ್ಮಾನ್ ಕಾರ್ಡ್ ಅಭಿಯಾನ

Update: 2020-09-22 16:53 GMT

ಮಂಗಳೂರು : ಸೋಶಿಯಲ್ ಡೆಮೊಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸೂರಿಂಜೆ ಗ್ರಾಮ ಸಮಿತಿಯ ವತಿಯಿಂದ ಸೂರಿಂಜೆಯ ಆರ್.ಆರ್ ಶೆಟ್ಟಿ ಕಾಂಪ್ಲೆಕ್ಸ್ ನಲ್ಲಿ ಅಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ ನಡೆಯಿತು.

ಸೂರಿಂಜೆಯ ಶಂಸುದ್ದೀನ್ ದಾರಿಮಿ ದುವಾದೊಂದಿಗೆ ಪ್ರಾರಂಭಗೊಂಡಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯ ಅಬೂಬಕರ್ ಕುಳಾಯಿ ನಡೆಸಿದರು. ಆಯುಷ್ಮಾನ್ ಕಾರ್ಡ್ ನೋಂದಾವಣೆ ಅಭಿಯಾನವು ಸಂಜೆ 6:30ರವರೆಗೆ ನಡೆದಿದ್ದು, ಅಭಿಯಾನದಲ್ಲಿ 424 ಮಂದಿ  ನೋಂದಾವಣೆಗೊಂಡರು ಮತ್ತು ಸ್ಥಳದಲ್ಲೇ ಕಾರ್ಡ್ ವಿತರಿಸಲಾಯಿತು.

ಕಾರ್ಯಕ್ರಮದ ಅದ್ಯಕ್ಷತೆಯನ್ನು ಎಸ್.ಡಿ.ಪಿ.ಐ ಸೂರಿಂಜೆ ಗ್ರಾಮ ಸಮಿತಿ ಅಧ್ಯಕ್ಷ ಮಾಲಿಕ್ ಸೂರಿಂಜೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ  ಹನೀಫ್ ಕಾಟಿಪಳ್ಳ ಅಧ್ಯಕ್ಷರು ಪಿ.ಎಫ್.ಐ ಸುರತ್ಕಲ್ ಡಿವಿಷನ್, ಉಸ್ಮಾನ್ ಅಬ್ದುಲ್ಲ ಅಧ್ಯಕ್ಷರು ಎಂ.ಜೆ.ಎಂ. ಸೂರಿಂಜೆ, ಅಯ್ಯೂಬ್ ಸದಸ್ಯರು ಎಸ್.ಡಿ.ಪಿ.ಐ ಸೂರಿಂಜೆ,  ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಕುಸುಮ, ಶೋಭಾ, ಎಂ.ಜೆ.ಎಂ. ಮಸೀದಿ ಕಾರ್ಯದರ್ಶಿ ಲಿಯಾಕತ್ ಅಲಿ ಮತ್ತು ಸೂರಿಂಜೆ ಸ್ಪೋರ್ಟಿಂಗ್ ಕ್ಲಬ್ ಅಧ್ಯಕ್ಷರಾದ ಮುಹಮ್ಮದ್ ಶರೀಫ್  ಭಾಗವಹಿಸಿದ್ದರು. ಯಾಕೂಬ್ ಸೂರಿಂಜೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News