ಅತಿವೃಷ್ಟಿ ಭತ್ತ ಬೆಳೆ ಹಾನಿ: ದೂರು ಸ್ವೀಕಾರ

Update: 2020-09-22 17:08 GMT

ಮಂಗಳೂರು, ಸೆ.22: ಪ್ರಸಕ್ತ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕಳೆದ ಹಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಭತ್ತದ ಬೆಳೆ ಹಾನಿಯಾದ ರೈತರು ದೂರು ಸಲ್ಲಿಸಬಹುದಾಗಿದೆ.

ರೈತರು ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬೇಕು. ಭತ್ತದ ಬೆಳೆ ವಿಮೆ ಮಾಡಿಸಿದ ರೈತರು ‘ಮಿಡ್ ಸೀಸನ್ ಅಡ್ವರ್‌ಸಿಟಿ’ ಅಡಿಯಲ್ಲಿ 72 ಗಂಟೆಗೆ ಒಳಗಾಗಿ ಸಂಬಂಧಿಸಿದ ವಿಮಾ ಸಂಸ್ಥೆಗೆ ಅಥವಾ ವಿಮೆ ಮಾಡಿಸಿದ ಬ್ಯಾಂಕಿಗೆ ದೂರು ದಾಖಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ, ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಮಂಗಳೂರು ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News