ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖೆಯಿಂದ ರಕ್ತದಾನ ಶಿಬಿರ

Update: 2020-09-23 15:28 GMT

ಬಂಟ್ವಾಳ, ಸೆ. 23: ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖೆಯ ವತಿಯಿಂದ ಎಂಜೆಎಂ ಫೌಂಡೇಶನ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಇದರ ವತಿಯಿಂದ ರಕ್ತದಾನ ಶಿಬಿರವನ್ನು ಎ.ಜೆ. ಆಸ್ಪತ್ರೆಯ ಸಹಯೋಗದೊಂದಿಗೆ ತುಂಬೆಯ ಕುಲ್ಸು ಸೆಂಟರ್ ಕಟ್ಟಡದಲ್ಲಿ ನಡೆಸಲಾಯಿತು. 

ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯ ಅಧ್ಯಕ್ಷ ಇರ್ಷಾದ್ ದಾರಿಮಿ ಅಲ್ ಜಝರಿ ರಕ್ತದಾನ ಶಿಬಿರವನ್ನು ಉದ್ಟಾಟಿಸಿದರು.

ಮಹಲ್ ಖತೀಬ್ ಅಬ್ದುಲ್ ಲತೀಫ್ ಫೈಝಿ ದುಅ ನೆರವೇರಿಸಿದರು. ಎಂಜೆಎಂ ಅಧ್ಯಕ್ಷ ಇಂತಿಯಾಝ್ ಆಲ್ಫಾ, ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖೆಯ ಗೌರವಾಧ್ಯಕ್ಷ ಹಬೀಬ್ ಅಬ್ದುಲ್ ರಹ್ಮಾನ್, ಬಿ.ಎ. ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಬಿ.ಅಬ್ದುಲ್ ಸಲಾಂ, ಎಂಎನ್ ಜಿ ಫೌಂಡೇಶನ್ ಇದರ ಗೌರವಾಧ್ಯಕ್ಷ ಮುನೀರ್, ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದೀಖ್ ಮಂಜೇಶ್ವರ, ಎಸ್ ವೈ ಎಸ್ ತುಂಬೆ ಶಾಖಾ ಅಧ್ಯಕ್ಷ ಹಾಜಿ ಅಬ್ದುರ್ರಹ್ಮಾನ್ ಹದ್ದಾದಿ, ವಿಖಾಯ ಬಂಟ್ವಾಳ ವಲಯ ಸಮಿತಿ ವೈಸ್ ಚೇರ್ ಮ್ಯಾನ್ ಫಯಾಝ್ ತುಂಬೆ ಕಾರ್ಯಕ್ರಮ ದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಎಸ್ಕೆಎಸ್ಸೆಸ್ಸೆಫ್ ತುಂಬೆ ಶಾಖಾ ಅಧ್ಯಕ್ಷ ಮುಹಮ್ಮದ್ ಇಸಾಕ್ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಖಲಂದರ್ ಸ್ವಾಗತಿಸಿದರು. ಟ್ರೆಂಡ್ ಕಾರ್ಯದರ್ಶಿ ಅಬ್ದುಲ್ ರಶೀದ್ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News