​ಹೊಳೆಗೆ ಬಿದ್ದು ಮಹಿಳೆ ಮೃತ್ಯು

Update: 2020-09-24 16:54 GMT

ಕುಂದಾಪುರ, ಸೆ.24: ಕಾಲುಜಾರಿ ಹೊಳೆಗೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸೆ.23ರಂದು ಮಧ್ಯಾಹ್ನ ವೇಳೆ ಮೂಡ್ಲಕಟ್ಟೆ ರೈಲ್ವೈ ಸೇತುವೆ ಸಮೀಪ ನಡೆದಿದೆ.

ಮೃತರನ್ನು ಪಾರ್ವತಿ(56) ಎಂದು ಗುರುತಿಸಲಾಗಿದೆ. ಗದ್ದೆಗೆ ಕೃಷಿ ಕೆಲಸಕ್ಕೆ ಹೋದ ಇವರು, ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News