ಅಂದರ್ ಬಾಹರ್: 17 ಮಂದಿ ಬಂಧನ

Update: 2020-09-24 16:57 GMT

ಉಡುಪಿ, ಸೆ.24: ಬ್ರಹ್ಮಾವರದ ಧರ್ಮಾವರಂ ರೆಸಿಡೆನ್ಸಿಯ ರೂಮ್‌ನಲ್ಲಿ ಸೆ.23ರಂದು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಡುತ್ತಿದ್ದ 17 ಮಂದಿ ಯನ್ನು ಉಡುಪಿ ಸೆನ್ ಪೊಲೀಸರು ಬಂಧಿಸಿದ್ದಾರೆ.

ಸದಾಶಿವ, ರಾಘವೇಂದ್ರ, ವಿಶ್ವನಾಥ, ನರಸಿಂಹ ಎಂ., ಈಶ್ವರ, ಜಯಂತ, ನರಸಿಂಹ ಡಿ.,ಬದ್ರೂದ್ದೀನ್, ರವಿ, ರಮೇಶ, ಶ್ರೀಧರ, ಶಂಕರ, ಪ್ರದೀಪ, ಸತೀಶ, ಸುಧಾಕರ, ಭರತ್, ಎಸ್.ನಾರಾಯಣ ಬಂಧಿತ ಆರೋಪಿಗಳು. ಇವರಿಂದ 1,30,360ರೂ. ನಗದು ಹಾಗೂ 18 ಮೊಬೈಲ್ ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News