​ಎನ್‌ಎಚ್‌ಎಂ ಮುಷ್ಕರ ಐದನೇ ದಿನಕ್ಕೆ

Update: 2020-09-25 16:30 GMT

ಉಡುಪಿ, ಸೆ.25: ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಜೀವವಿಮೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಇಂದು ನಾಲ್ಕನೇ ದಿನವನ್ನು ಪೂರ್ಣಗೊಳಿಸಿದೆ.

ಇಂದು ಸಹ ಕೆಲಸಕ್ಕೆ ಹಾಜರಾಗದೇ ಮನೆಯಲ್ಲೇ ಉಳಿದ ಇವರು, ಸರಕಾರ ಬೇಡಿಕೆ ಈಡೇರಿಸುವವರೆಗೂ ಮುಷ್ಕರ ಮುಂದುವರಿಸುವ ನಿರ್ಧಾರ ತಳೆದಿದ್ದಾರೆ. ಇದರಿಂದ ಸತತ ನಾಲ್ಕನೇ ದಿನವೂ ದಿನದ ಕೊರೋನ ಕುರಿತ ಅಂಕಿಅಂಶಗಳು ಜಿಲ್ಲಾ ಆರೋಗ್ಯ ಇಲಾಖೆ ಮೂಲಕ ಪ್ರಕಟವಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News