‘ಡಿಸಿ ಆದೇಶದವರೆಗೆ ಮದ್ರಸ ಆರಂಭಿಸಬೇಡಿ’
Update: 2020-09-25 16:59 GMT
ಉಡುಪಿ, ಸೆ.25: ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಆದುದರಿಂದ ರಾಜ್ಯ ಸರಕಾರ, ರಾಜ್ಯ ವಕ್ಫ್ ಮಂಡಳಿ ಹಾಗೂ ಜಿಲ್ಲಾಡಳಿತದಿಂದ ಆದೇಶ ಬರುವವರೆಗೆ ಉಡುಪಿ ಜಿಲ್ಲೆ ಯಲ್ಲಿ ಯಾವುದೇ ಮದ್ರಸವನ್ನು ಆರಂಭಿಸಬಾರದು ಎಂದು ಉಡುಪಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಹಾಜಿ ಕೆ.ಪಿ.ಇಬ್ರಾಹಿಂ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.