ಪ್ರತಿ ಮನೆಗಳಲ್ಲೂ ತಾಜುಲ್ ಫುಖಹಾ ಸಂಸ್ಮರಣೆಗೆ ಕರೆ

Update: 2020-09-25 17:11 GMT

ಉಡುಪಿ, ಸೆ.25: ನಮ್ಮನ್ನಗಲಿದ ಉಡುಪಿ, ಹಾಸನ, ಶಿವಮೊಗ್ಗ ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಮರ್ಹೂಂ ತಾಜುಲ್ ಫುಖಹಾ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ನಿಧನದ ಮೂರನೇ ದಿನವಾದ ಸೆ.26ರಂದು ಪ್ರತಿ ಕಾರ್ಯಕರ್ತರ ಮನೆಗಳಲ್ಲಿ ದುಆ ಮಜ್ಲಿಸ್ ಮಾಡಲು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿ ಕರೆ ನೀಡಿದೆ.

ಶೈಖುನಾ ಬೇಕಲ್ ಉಸ್ತಾದ್ರವರ ವಿಯೋಗ ಕರ್ನಾಟಕದ ಮುಸ್ಲಿಂರಿಗೆ ತುಂಬಲಾರದ ನಷ್ಟವಾಗಿದ್ದು, ಸಮುದಾಯಕ್ಕೆ ಅವರ ಸೇವೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರ ಆದರ್ಶಗಳು ಇನ್ನೂ ಇಲ್ಲಿ ಜೀವಂತವಾಗಿದ್ದು ಅದನ್ನು ಪ್ರತಿ ಮನೆಗಳಿಗೂ ತಲುಪಿಸುವ ಕೆಲಸ ಇಲ್ಲಿ ನಡೆಯಬೇಕಾಗಿದೆ. ಆದ್ದರಿಂದ ಮಗ್ರಿಬ್ ಬಳಿಕ ಪ್ರತಿ ಕಾರ್ಯಕರ್ತರ ಮನೆಗಳಲ್ಲಿ ಮನೆಯ ವರೆಲ್ಲರೂ ಸೇರಿ ತಹ್ಲೀಲ್, ಯಾಸೀನ್ ಹಾಗೂ ಬೇಕಲ್ ಉಸ್ತಾದ್ ಸ್ಮರಣೆಯ ಮೂಲಕ ಸಂಸ್ಮರಣಾ ದಿನ ಆಚರಣೆ ಮಾಡಬೇಕಾಗಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News