ಬೈಂದೂರು- ಕುಂದಾಪುರ ರಾ.ಹೆ.ಯ ಅರಾಟೆಯ ಸೇತುವೆಯಲ್ಲಿ ಬಿರುಕು: ವಾಹನ ಸಂಚಾರ ಸ್ಥಗಿತ

Update: 2020-09-26 08:04 GMT

ಕುಂದಾಪುರ, ಸೆ.26: ಹೊಸದಾಗಿ ನಿರ್ಮಾಣಗೊಂಡ ಬೈಂದೂರು- ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಹೆಮ್ಮಾಡಿ ಸಮೀಪದ ಅರಾಟೆಯ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸದ್ಯ ಈ ಸೇತುವೆಯಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಪೂನಾದ ಐಆರ್‌ಬಿ ಗುತ್ತಿಗೆ ಕಂಪೆನಿಯು ಮೂರ್ನಾಲ್ಕು ವರ್ಷಗಳ ಹಿಂದೆ ಕುಂದಾಪುರ- ಬೈಂದೂರು ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿಯ ಸಂದರ್ಭದಲ್ಲಿ ಈ ಸೇತುವೆಯನ್ನು ನಿರ್ಮಿಸಿತ್ತು. ಆದರೆ ಇದೀಗ ಈ ಹೊಸ ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಳಿಸಿರುವ ಪೊಲೀಸರು, ಇನ್ನೊಂದು ಬದಿಯಲ್ಲಿರುವ ಹಳೆಯ ಸೇತುವೆಯ ಮೂಲಕ ಎರಡು ಕಡೆಗಳ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News