ಎನ್‌ಎಚ್‌ಎಂ ಮುಷ್ಕರ ಮುಂದುವರಿಕೆ

Update: 2020-09-26 16:29 GMT

ಉಡುಪಿ, ಸೆ. 26: ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಜೀವವಿಮೆ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಎಚ್‌ಎಂ)ದ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರು ನಡೆಸುತ್ತಿರುವ ಮುಷ್ಕರ ಶನಿವಾರ ಐದನೇ ದಿನವನ್ನು ಪೂರ್ಣ ಗೊಳಿಸಿದ್ದು, ಮುಂದುವರಿದಿದೆ.

ಸರಕಾರ ಹಾಗೂ ಸಂಘದ ಪದಾಧಿಕಾರಿಗಳ ನಡುವೆ ನಿನ್ನೆ ಮಾತುಕತೆ ನಡೆದಿದ್ದು, ಆದರೆ ಯಾವುದೇ ಸಕಾರಾತ್ಮ ಬೆಳವಣಿಗೆ ಕಂಡುಬಂದಿಲ್ಲ ಎಂದು ತಿಳಿದುಬಂದಿಲ್ಲ. ಹೀಗಾಗಿ ಇವರ ಮುಷ್ಕರ ನಾಳೆಯೂ ಮುಂದುವರಿಯಲಿದೆ ಎಂದು ಮುಷ್ಕನಿರತರು ತಿಳಿಸಿದ್ದಾರೆ.

ಸರಕಾರ ಹಾಗೂ ಸಂಘದ ಪದಾಧಿಕಾರಿಗಳ ನಡುವೆ ನಿನ್ನೆ ಮಾತುಕತೆ ನಡೆದಿದ್ದು, ಆದರೆ ಯಾವುದೇ ಸಕಾರಾತ್ಮ ಬೆಳವಣಿಗೆ ಕಂಡುಬಂದಿಲ್ಲ ಎಂದು ತಿಳಿದುಬಂದಿಲ್ಲ. ಹೀಗಾಗಿ ಇವರ ಮುಷ್ಕರ ನಾಳೆಯೂ ಮುಂದುವರಿಯಲಿದೆ ಎಂದು ಮುಷ್ಕರನಿರತರು ತಿಳಿಸಿದ್ದಾರೆ. ಇದರಿಂದ ಸತತ ಐದನೇ ದಿನವೂ ಕೊರೋನದ ದೈನಂದಿನ ಅಂಕಿಅಂಶಗಳ ಕುರಿತು ಜಿಲ್ಲಾ ಆರೋಗ್ಯ ಇಲಾಖೆ ಪ್ರಕಟಿಸುವ ಬುಲೆಟಿನ್ ಇಂದೂ ಪ್ರಕಟ ಗೊಂಡಿಲ್ಲ. ಉಡುಪಿ ಜಿಲ್ಲೆಯ ಮಟ್ಟಿಗಂತೂ ದೈನಂದಿನ ವರದಿ ಎನ್‌ಎಚ್‌ಎಂ ನೌಕರನ್ನೇ ಅವಲಂಬಿಸಿದ್ದು, ಅವರು ದೈನಂದಿನ ವರದಿಗಳನ್ನು ಸಂಗ್ರಹಿಸಿ, ಅಧಿಕೃತ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡದೇ ಇರುವುದರಿಂದ ದಿನದಲ್ಲಿ ದೃಢಪಟ್ಟ ಕೊರೋನ ಪಾಸಿಟಿವ್ ಸಂಖ್ಯೆ, ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಗೊಂಡವರು ಹಾಗೂ ದಿನದಲ್ಲಿ ಸೋಂಕಿನಿಂದ ಮೃತಪಟ್ಟವರ ಮಾಹಿತಿಗಳು ಇಲಾಖೆಯ ಕೈಸೇರುತ್ತಿಲ್ಲ.

ರಾಜ್ಯ ವರದಿಯಲ್ಲಿ 57: ಆದರೆ ಬೇರೆ ಮೂಲಗಳಿಂದ ವರದಿ ಸಂಗ್ರಹಿಸುತ್ತಿ ರುವ ರಾಜ್ಯ ಆರೋಗ್ಯ ಇಲಾಖೆ ಜಿಲ್ಲೆಯ ಅಪೂರ್ಣ ವರದಿಯನ್ನು ತನ್ನ ದೈನಂದಿನ ಬುಲೆಟಿನ್‌ನಲ್ಲಿ ಪ್ರಕಟಿಸುತಿದ್ದು, ಅದರಲ್ಲಿ ಇಂದು 57 ಪಾಸಿಟಿವ್ ಪ್ರಕರಣವನ್ನು ಉಲ್ಲೇಖಿಸಿದೆ. ಇದರಿಂದ ಜಿಲ್ಲೆಯಲ್ಲಿಈವರೆಗೆ ಪಾಸಿಟಿವ್ ದೃಢ ಪಟ್ಟವರ ಸಂಖ್ಯೆ 16,034 ಎಂದು ಅದು ಹೇಳಿದೆ. ಅಲ್ಲದೇ 116 ಮಂದಿ ಇಂದು ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಬಿಡುಗಡೆಗೊಂಡವರ ಒಟ್ಟು ಸಂಖ್ಯೆ 14,395 ಎಂದು ತಿಳಿಸಿದೆ. ಜಿಲ್ಲೆಯಲ್ಲಿ 1496 ಸಕ್ರೀಯ ಪ್ರಕರಣಗಳಿವೆ ಎಂದೂ ವರದಿ ಹೇಳಿದೆ. ಆದರೆ ಮೃತರ ಸಂಖ್ಯೆ ಇನ್ನೂ 143ರಲ್ಲೇ ನಿಂತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News