ಕರ್ನಾಟಕ ಬಂದ್: ಎಸ್‌ಡಿಪಿಐ ಬೆಂಬಲ

Update: 2020-09-27 12:03 GMT

ಉಡುಪಿ, ಸೆ.27: ರೈತ ಹಾಗೂ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಸೆ.28ರ ಕರ್ನಾಟಕ ಬಂದ್‌ಗೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಡುಪಿ ಜಿಲ್ಲೆ ಸಂಪೂರ್ಣ ಬೆಂಬಲ ಸೂಚಿಸಿದೆ.

ಕೃಷಿಭೂಮಿಯನ್ನು ಖರೀದಿಸಲು ಅನುಮಾಡಿ ಕೊಟ್ಟು ಬಂಡವಾಳಶಾಹಿ ಗಳಿಗೆ ಮಣೆ ಹಾಕುವ ಕೆಲಸವನ್ನು ಕೇಂದ್ರ ಸರಕಾರ ಮಾಡುತ್ತಿದೆ. ರೈತರ ಜೀವನದ ಜೊತೆಗೆ ಚೆಲ್ಲಾಟ ಆಡುವ ಬಿಜೆಪಿ ಸರಕಾರದ ದುರ್ನೀತಿ ಖಂಡ ನೀಯ. ಆದುದರಿಂದ ಪಕ್ಷದ ಕಾರ್ಯಕರ್ತರು ಈ ಬಂದ್‌ಗೆ ಸಂಪೂರ್ಣ ಬೆಂಬಲ ಸೂಚಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಸಾಸ್ತಾನ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News