ಸೆ.28: ಬೈಂದೂರಿನಲ್ಲಿ ಕಾರ್ಮಿಕರ ಪ್ರತಿಭಟನೆ

Update: 2020-09-27 12:05 GMT

ಉಡುಪಿ, ಸೆ.27: ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರ್ನಾಟಕ ರಾಜ್ಯ ಕರೆಯಂತೆ ಸೆ.28ರ ಕರ್ನಾಟಕ ರಾಜ್ಯ ಬಂದ್ ಯಶಸ್ವಿ ಗೊಳಿಸಲು ರೈತ, ಕೃಷಿಕೂಲಿಕಾರರ, ಕಾರ್ಮಿಕ, ಸಂಘಟನೆಗಳಾದ ಎಐಕೆಎಸ್, ಎಐಎಡಬ್ಲ್ಯುಯು, ಸಿಐಟಿಯು ಸಕ್ರೀಯವಾಗಿ ಭಾಗವಹಿಸಲಿವೆ.

ಈ ಪ್ರಯುಕ್ತ ಬೆಳಗ್ಗೆ 10.30ಕ್ಕೆ ಬೈಂದೂರು ಸಿಐಟಿಯು ಕಚೇರಿಯಲ್ಲಿ ಕಾರ್ಮಿಕರು ಸಭೆ ಸೇರಿ, ಬಳಿಕ ರಾಷ್ಟ್ರೀಯ ಹೆದ್ದಾರಿ(ಬೈಂದೂರು ಜಂಕ್ಷನ್) ಅಂಡರ್ ಪಾಸ್ ಬಳಿ ಪ್ರತಿಭಟನೆ ನಡೆಸಲಾಗುವುದು ಎಂದು ವೆಂಕಟೇಶ್ ಕೋಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News