ಯಕ್ಷಗಾನ ಕಲಾರಂಗ 45ನೇ ವಾರ್ಷಿಕ ಮಹಾಸಭೆ

Update: 2020-09-27 16:19 GMT

ಉಡುಪಿ, ಸೆ.27: ಯಕ್ಷಗಾನ ಕಲಾರಂಗದ 45ನೇ ವಾರ್ಷಿಕ ಮಹಾಸಭೆ ಕೆ.ಗಣೇಶ್ ರಾವ್ ಅಧ್ಯಕ್ಷೆಯಲ್ಲಿ ಉಡುಪಿ ಪೇಜಾವರ ಮಠದ ಶ್ರೀರಾಮವಿಠಲ ಸಭಾವನದಲ್ಲಿ ಸೆ.26ರಂದು ಜರಗಿತು.

ಸಬೆಯಲ್ಲಿ ವರದಿ ವರ್ಷದ ಅಗಲಿದ ವ್ಯಕ್ತಿಗಳಿಗೆ ಉಪಾಧ್ಯಕ್ಷ ಎಸ್.ವಿ.ಭಟ್ ನುಡಿನಮನ ಸಲ್ಲಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ವರದಿಯನ್ನು, ಕಾರ್ಯದರ್ಶಿ ಮುರಲಿ ಕಡೆಕಾರ್ ವಾರ್ಷಿಕ ವರದಿಯನ್ನು ಹಾಗೂ ಕೋಶಾಧಿಕಾರಿ ಕೆ.ಮನೋಹರ್ ಮತ್ತು ಪ್ರೊ.ಕೆ.ಸದಾಶಿವ ರಾವ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು.

ಕೆ.ರಾಜಾರಾಮ ಶೆಟ್ಟಿಯನ್ನು ಲೆಕ್ಕಪರಿಷೋಧಕರಾಗಿ ಆರಿಸಲಾಯಿತು. ಬಳಿಕ 25 ಜನ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹಾಗೂ ಆಹ್ವಾನಿತ ರನ್ನು ಆಯ್ಕೆ ಮಾಡಲಾಯಿತು. ಜತೆಕಾರ್ಯದರ್ಶಿ ಎಚ್.ಎನ್.ಶೃಂಗೇಶ್ವರ ವಂದಿಸಿ ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News