ದಲಿತ ಚಳವಳಿಯ ನಾಯಕ ಗುರುವಪ್ಪ ಮಾಸ್ತರ್‌ಗೆ ಶ್ರದ್ಧಾಂಜಲಿ

Update: 2020-09-27 16:25 GMT

ಮಲ್ಪೆ, ಸೆ.27: ಶನಿವಾರ ನಿಧನ ಹೊಂದಿದ ಉಡುಪಿ ಜಿಲ್ಲೆಯಲ್ಲಿ ದಲಿತ ಚಳವಳಿಯನ್ನು ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ ಹಿರಿಯ ನಾಯಕ ಗುರುವಪ್ಪ ಮಾಸ್ತರ್‌ಗೆ ಅಂಬೇಡ್ಕರ್ ಯುವಸೇನೆ ವತಿಯಿಂದ ರವಿವಾರ ಭಾಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಮಲ್ಪೆ ಸರಸ್ವತಿ ಬಯಲು ರಂಗಮಂದಿರದಲ್ಲಿ ನಡೆದ ನುಡಿನಮನ ಕಾರ್ಯ ಕ್ರಮದಲ್ಲಿ ಮಾತನಾಡಿದ ದಲಿ ಚಿಂತಕ ಜಯನ್ ಮಲ್ಪೆ, ಉಡುಪಿಯಲ್ಲಿ ದಲಿತರ ಸಂಘಟನೆಗೆ ಆಸ್ತಿ ಹಾಕಿದ ಅನುಭಾವಿ, ಹಳ್ಳಿಗಳಲ್ಲಿ ಅರಿವಿನ ಅಂಕುರ ಕ್ಕಾಗಿ ಸತತ ಶ್ರಮಿಸಿದ ಸಂಘಷರ್ ಜೀವಿ. ಮಾತನಾಡುವ ಅಂಜುವ ದಲಿತರಲ್ಲಿ ಗರ್ಜಿಸುವ ಧೈರ್ಯ ತಂದವರು ಎಂದರು.

ದಲಿತ ನಾಯಕ ಸುಂದರ್ ಕಪ್ಪೆಟ್ಟು, ಅಂಬೇಡ್ಕರ್ ಯುವಸೇನೆಯ ಅಧ್ಯಕ್ಷ ಹರೀಶ್ ಸಲ್ಯಾನ್, ಗಣವಂತ ತೊಟ್ಟಂ, ಸುಮಿತ್ ನೆರ್ಗಿ, ಭಗವಾನ್ ಮಲ್ಪೆ, ದಿನೇಶ್ ಜವನೆರಕಟ್ಟೆ, ವಿಠಲ ಅಮ್ಮುಂಜೆ, ಪ್ರಶಾಂತ್ ಬಿ.ಎನ್, ಅರುಣ್ ಸಲ್ಯಾನ್, ಸುಲೋಚನ ತೊಟ್ಟಂ, ವಿನೋದ ಜಯರಾಜ್, ಸಂದ್ಯಾ ಕೃಷ್ಣ, ಶಶಿಕಲಾ ತೊಟ್ಟಂ, ಹರೀಶ್ ಅಮೀನ್ ನೆರ್ಗಿ, ವಾಸುದೇವ ಮಾಸ್ತರ್, ಸುರೇಶ್ ಚಿಟ್ಪಾಡಿ, ಶಶಿಕಲಾ ಸಲ್ಯಾನ್ ಬಲರಾಮ ನಗರ, ಮೋಹನ್‌ದಾಸ್ ಚಿಟ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News