ಲಾರಿಗೆ ಬೈಕ್ ಢಿಕ್ಕಿ: ಸ್ಥಳದಲ್ಲೇ ಮೃತಪಟ್ಟ ಸವಾರ

Update: 2020-09-27 16:36 GMT

ಮಂಗಳೂರು, ಸೆ.27: ಈಚರ್ ಲಾರಿ - ಬೈಕ್ ಢಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗಂಜಿಮಠ-ಮಳಲಿ ರಸ್ತೆಯ ಮಳಲಿ ಕ್ರಾಸ್ ಬಳಿ ರವಿವಾರ ಸಂಜೆ ನಡೆದಿದೆ.

ಗಂಜಿಮಠ ಸಮೀಪದ ಒಡ್ಡೂರಿನ ಕಾನೆಕೋಡಿ ನಿವಾಸಿ ಯತೀಶ್ ಕೊಟ್ಟಾರಿ(35) ಮೃತ ಬೈಕ್ ಸವಾರ ಎಂದು ಗುರುತಿಸಲಾಗಿದೆ.

ರವಿವಾರ ಸಂಜೆ 6 ಗಂಟೆ ಸುಮಾರಿಗೆ ಈತ ಒಡ್ಡೂರಿನ ತನ್ನ ಬೈಕಿನಲ್ಲಿ ಮನೆಯತ್ತ ಹೋಗುತ್ತಿದ್ದಾಗ ದಾರಿಮಧ್ಯೆ ಎದುರಿನಿಂದ ಆಗಮಿಸಿದ ಈಚರ್ ಲಾರಿಗೆ ಢಿಕ್ಕಿಯಾಗಿದೆ. ಅವಿವಾಹಿತರಾಗಿದ್ದ ಯತೀಶ್ ವೃತ್ತಿಯಲ್ಲಿ ಇಲೆಕ್ಟ್ರಿಶಿಯನ್ ಆಗಿದ್ದರು ಎಂದು ಪೊಲೀಸರು ತಿಳಿಸಿದ್ದರೆ.
ಈ ಕುರಿತು ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News