ಭಟ್ಕಳ: ಪಿಎಸ್‌ಐ ಯಾಗಿ ಆಯ್ಕೆಯಾಗಿರುವ ಮಮತಾ ನಾಯ್ಕರಿಗೆ ಸನ್ಮಾನ

Update: 2020-09-27 16:47 GMT

ಭಟ್ಕಳ : ನೂತನವಾಗಿ ಸಬ್ ಇನ್‍ಸ್ಪೆಕ್ಟರ್ ಆಗಿ ಆಯ್ಕೆಯಾಗಿರುವ ತಾಲೂಕಿನ ಹಡೀನ್ ಗ್ರಾಮದ ನಿವಾಸಿ ಮಮತಾ ಶಂಕರ ನಾಯ್ಕ ಇವರಿಗೆ ಭಟ್ಕಳ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕೌಟುಂಬಿಕ ಬಡತನದ ನಡುವೆಯೂ ಮಮತಾ ನಾಯ್ಕ ತೋರಿರುವ ಸಾಧನೆಯನ್ನು ಸಂಘದ ಸದಸ್ಯರು ಮುಕ್ತ ಕಂಠದಿಂದ ಶ್ಲಾಘಿಸಿದರು. ಈ ಸಂದರ್ಭದಲ್ಲಿ ಭಟ್ಕಳ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯ್ಕ, ಪದಾಧಿಕಾರಿಗಳಾದ ಪ್ರವೀಣ ಶೆಟ್ಟಿ, ರಾಘವೇಂದ್ರ ಕೋಣೆಮನೆ, ರಾಘು ಜೋಗಿ, ಕಿರಣ್ ಶೆಟ್ಟಿ, ಅರುಣ್ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News