ಕ್ರಿಕೆಟ್ ಬೆಟ್ಟಿಂಗ್ ದಂಧೆ: 11 ಆರೋಪಿಗಳ ಬಂಧನ

Update: 2020-09-29 17:20 GMT

ಮಂಗಳೂರು, ಸೆ. 29: ಕ್ರಿಕೆಟ್ ಬೆಟ್ಟಿಂಗ್ ದಂಧೆಯಲ್ಲಿ ಪಾಲ್ಗೊಂಡ ಆರೋಪದಲ್ಲಿ 11 ಮಂದಿಯನ್ನು ನಗರ ಸಿಸಿಬಿ ಮತ್ತು ಬಂದರು ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು ನಿವಾಸಿಗಳಾದ ಶ್ರೀನಿವಾಸ್, ಜಗದೀಶ್, ಉನ್ನಿಕೃಷ್ಣನ್, ಸುಧಾಕರ್, ಪ್ರತಾಪ್ ಶೆಟ್ಟಿ, ಜಾನ್ ಕೊಯಲ್ಲೋ, ತಿಮ್ಮಪ್ಪ ಗೌಡ, ರಿಚರ್ಡ್ ಲೋಬೋ, ಮೊಹಿದ್ದೀನ್ ಕುನ್ನಿ, ಕೆ. ಸುಬ್ರಹ್ಮಣ್ಯ ಶೇಟ್, ಗೌತಮ್ ಮಜಿ ಬಂಧಿತ ಆರೋಪಿಗಳು. ಆರೋಪಿಗಳಿಂದ 11 ಮೊಬೈಲ್, 15 ಸಾವಿರ ರೂ. ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ನಗರದ ಕಾರ್‌ಸ್ಟ್ರೀಟ್ ಮಹಾಮ್ಮಾಯಿ ಕೆರೆ ಸಮೀಪದ ಪ್ಲೈವುಡ್ ಅಂಗಡಿಯೊಂದರಲ್ಲಿ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಮತ್ತು ಬಂದರು ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರ್ ವಿಕಾಸ್ ಕುಮಾರ್ ನಿರ್ದೇಶನದಂತೆ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗ ಡಿಸಿಪಿ ಅರುಣಾಂಶುಗಿರಿ, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಮಾರ್ಗದರ್ಶನದಂತೆ ಬಂದರು ಠಾಣಾ ಇನ್‌ಸ್ಪೆಕ್ಟರ್ ಗೋವಿಂದರಾಜು, ಎಸ್‌ಐ ಗುರುಕಾಂತಿ ಮತ್ತು ಸಿಬ್ಬಂದಿ, ಸಿಸಿಬಿ ಸಬ್‌ಇನ್‌ಸ್ಪೆಕ್ಟರ್ ಕಬ್ಬಳ್‌ರಾಜ್ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News