ಗಾಂಜಾ ಸೇವನೆ: ಏಳು ಮಂದಿ ಆರೋಪಿಗಳು ಸೆರೆ

Update: 2020-09-29 17:21 GMT

ಮಂಗಳೂರು, ಸೆ.29: ನಗರದ ವಿವಿಧೆಡೆ ಮಂಗಳವಾರ ಕಾರ್ಯಾಚರಣೆ ನಡೆಸಿದ ಅಬಕಾರಿ ಇಲಾಖೆ ಅಧಿಕಾರಿಗಳು ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದಲ್ಲಿ ಏಳು ಮಂದಿಯನ್ನು ಬಂಧಿಸಿದ್ದು, 500 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಮಂಗಳೂರಿನ ಅಲಿಸ್ಟರ್, ಪ್ರಥಮ್ ಶೆಟ್ಟಿ, ಪ್ರಥಮ್ ದೇವಾಡಿಗ, ವಿಶ್ವಾಸ್, ಮಂಜುನಾಥ್, ಚಿರಾಗ್ ಹಾಗೂ ಕ್ರಿಸ್ ಬಂಧಿತರು.

ದ.ಕ. ಅಬಕಾರಿ ಅಧೀಕ್ಷಕಿ ಜೈಲಜಾ ಎ. ಕೋಟೆ ನಿರ್ದೇಶನದಂತೆ ಮಂಗಳೂರು ವಿಭಾಗದ ಅಬಕಾರಿ ಅಧೀಕ್ಷಕ ವಿನೋದ್ ಕುಮಾರ್ ಮಾರ್ಗದರ್ಶನದಲ್ಲಿ ಹಾಗೂ ಅಬಕಾರಿ ಉಪ ಅಧೀಕ್ಷಕ ಶಿವಪ್ರಸಾದ್ ನೇತೃತ್ವದಲ್ಲಿ ನಿರೀಕ್ಷಕಿ ಸೀಮಾ ಮರಿಯಾ ಸುವಾರೀಸ್, ಅಬಕಾರಿ ಉಪ ನಿರೀಕ್ಷಕರಾದ ಪ್ರತಿಭಾ ಜಿ., ಕಮಲಾ ಎಚ್.ಎನ್. ಹಾಗೂ ಸಿಬ್ಬಂದಿ ಸಂತೋಷ್ ಕುಮಾರ್, ಸುನಿಲ್, ಉಮೇಶ್ ಎಚ್., ಸಂದೀಪ್ ಕುಮಾರ್ ಹಾಗೂ ಮನಮೋಹನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News