ಇಡ್ಯ: ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಚಾಲನೆ

Update: 2020-09-30 12:30 GMT

ಮಂಗಳೂರು, ಸೆ.30: ಮಂಗಳೂರು ಮಹಾನಗರ ಪಾಲಿಕೆಯ ಇಡ್ಯಾ ಪೂರ್ವ 6ನೇ ವಾರ್ಡಿನ ಲಾರ್ಡ್ ಕೃಷ್ಣ ಎಸ್ಟೇಟ್ ಬಳಿಯ ರಸ್ತೆಗೆ 20 ಲಕ್ಷ ಅನುದಾನದಲ್ಲಿ ಕಾಂಕ್ರಿಟೀಕರಣಕ್ಕೆ ಶಾಸಕ ಡಾ.ವೈ ಭರತ್ ಶೆಟ್ಟಿ ಬುಧವಾರ ಚಾಲನೆ ನೀಡಿದರು.

ಈ ಸಂದರ್ಭ ಉಪ ಮೇಯರ್ ವೇದಾವತಿ, ಸ್ಥಳೀಯ ಕಾರ್ಪೊರೇಟರ್ ಸರಿತಾ ಶಶಿಧರ್, ಮಾಜಿ ಕಾರ್ಪೊರೇಟರ್ ಗುಣಶೇಖರ್ ಶೆಟ್ಟಿ, ನಾಗೇಂದ್ರ ಭಾರಧ್ವಾಜ್, ಪಿಡಬ್ಲುಒ ಇಂಜಿನಿಯರ್ ಲಕ್ಷ್ಮಣ್, ಗುತ್ತಿಗೆದಾರರು ಸುಧಾಕರ್ ಪೂಂಜಾ, ಲಾರ್ಡ್ ಕೃಷ್ಣಾ ಎಸ್ಟೇಟ್ ಅಧ್ಯಕ್ಷ ಹೇಮಚಂದ್ರ ಆಳ್ವ, ಪಕ್ಷದ ಪ್ರಮುಖರಾದ ದಿನಕರ್ ಇಡ್ಯಾ, ಸುಲತಾ ಪೂಜಾರಿ, ಶಶಿಧರ್ ಕಟ್ಲ, ಬಾಬುಚಂದ್ರ, ಅನಿಲ್ ಸಾಲ್ಯಾನ್, ಲೀಲಾಧರ್ ಶೆಟ್ಟಿ, ರಮೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News