ದಲಿತರ ಮೇಲಿನ ಅತ್ಯಾಚಾರ ಹೆಚ್ಚಳ : ಅ.1ರಂದು ದಸಂಸದಿಂದ ಪ್ರತಿಭಟನೆ

Update: 2020-09-30 14:40 GMT

ಉಡುಪಿ, ಸೆ.30: ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿ ಮೋನಿಶಾಳನ್ನು ನಾಲ್ಕು ಮಂದಿ ಠಾಕೂರರು ಸಾಮೂಹಿಕ ಅತ್ಯಾಚಾರ ಗೈದು, ಸಾಕ್ಷಿ ನುಡಿಯದಂತೆ ನಾಲಿಗೆ ಕೊಯ್ದು, ಕೈ, ಕಾಲು ಮುರಿದು ಕೊಲೆ ಮಾಡಿದ್ದನ್ನು ವಿರೋಧಿಸಿ ಮತ್ತು ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ನಾಳೆ ಅ.1ರಂದು ಸಂಜೆ 5:30ಕ್ಕೆ ನಗರದ ಅಜ್ಜರಕಾಡಿನ ಹುತಾತ್ಮ ಚೌಕದ ಬಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯ ಎಲ್ಲಾ ದಲಿತ ಬಂಧುಗಳು,ಅಲ್ಪಸಂಖ್ಯಾತ ಬಂಧುಗಳು, ಹಿಂದುಳಿದ ವರ್ಗಗಳ ಬಂಧುಗಳು, ಪ್ರಗತಿಪರ ಸಂಘಟನೆಗಳು ಮತ್ತು ಎಲ್ಲಾ ಮಾನವೀಯ ಪ್ರಜಾಪ್ರಭುತ್ವವಾದಿಗಳು ಇದರಲ್ಲಿ ಭಾಗವಹಿಸಬೇಕೆಂದು ದಸಂಸ ಅಂಬೇಡ್ಕರ್ ವಾದದ ಜಿಲ್ಲಾ ಪ್ರಧಾನ ಸಂಚಾಲಕರಾದ ಸುಂದರ ಮಾಸ್ತರ್ ವಿನಂತಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News