ಅಂದರ್‌ ಬಾಹರ್: ಆರು ಮಂದಿ ಬಂಧನ

Update: 2020-09-30 16:33 GMT

ಶಂಕರನಾರಾಯಣ, ಸೆ. 30: ಅಂಪಾರು ಪೇಟೆ ಸಮೀಪದ ಹಾಡಿಯಲ್ಲಿ ಸೆ.29ರಂದು ಸಂಜೆ ವೇಳೆ ಅಂದರ್-ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಆರು ಮಂದಿಯನ್ನು ಶಂಕರನಾರಾಯಣ ಪೊಲೀಸರು ಬಂಧಿಸಿದ್ದಾರೆ.

ರಮೇಶ್ ಪೂಜಾರಿ(46) ಕೃಷ್ಣ ಶೆಟ್ಟಿ(22), ಭಾಸ್ಕರ ಪೂಜಾರಿ(28), ಕರುಣಾಕರ ಶೆಟ್ಟಿ(35), ರಾಜು ವಾಲ್ತೂರು(59), ಪ್ರಭಾ ಬಂಧಿತ ಆರೋಪಿ ಗಳು. ಬಂಧಿತರಿಂದ 5,680ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News