ಮನೆಯ ತಡೆಬೇಲಿ ಕಿತ್ತೆಸೆದ ಗ್ರಾಪಂ ಅಧಿಕಾರಿಗಳು: ಆರೋಪ

Update: 2020-10-01 12:22 GMT

ಉಡುಪಿ, ಅ.1: ಹಾವಂಜೆ ಗ್ರಾಮದ ಕೊಳಲಗಿರಿ ಮೀನು ಮಾರುಕಟ್ಟೆ ಮುಂಭಾಗದ ಭಾರತಿ ಶಿವರಾಮ್ ಶೆಟ್ಟಿ ಎಂಬವರ ಮನೆಯ ತಡೆಬೇಲಿಯನ್ನು ಯಾವುದೇ ನೋಟಿಸ್ ನೀಡದೆ ಸೆ.30ರಂದು ಮಧ್ಯಾಹ್ನ ವೇಳೆ ಹಾವಂಜೆ ಗ್ರಾಪಂ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳು ಹಾಗೂ ಜನಪ್ರತಿನಿಧಿಗಳು ಜೊತೆಗೂಡಿ ಕಿತ್ತು ಎಸೆದಿರುವುದಾಗಿ ಮನೆಯವರು ಆರೋಪಿಸಿದ್ದಾರೆ.

‘ಪರಿಪರಿಯಾಗಿ ವಿನಂತಿಸಿಕೊಂಡರು ನಮ್ಮ ಮೇಲೆ ದೌರ್ಜನ್ಯ ಎಸಗಿದ್ದಾರೆ. ನಮ್ಮ ಮನೆಯ ನಂತರ, ಮುಂದೆ ಸಾಗಿ ಸುಮಾರು 10 ಮನೆಗಳಿಗೆ ಈ ರೀತಿ ತೊಂದರೆ ನೀಡಿದ್ದಾರೆ. ಮುಂದೆ ಬರುವ ಗ್ರಾಪಂ ಚುನಾವಣೆ ಇರುವುದರಿಂದ ಕೆಲವೊಂದು ಕುಮ್ಮಕ್ಕು ಕೊಡುವ ರಾಜಕಾರಣಿಗಳು ಜೊತೆ ಸೇರಿ ಈ ಕ್ರಮ ಕೈಗೊಂಡಿದ್ದಾರೆ’ ಎಂದು ಭಾರತಿ ಶೆಟ್ಟಿ ಆರೋಪಿಸಿದ್ದಾರೆ.

‘ನಾವು ಸುಮಾರು 45 ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದೇವೆ. ಕೂಡಲೇ ಮನೆಯ ತಡೆ ಬೇಲಿಯನ್ನು ಪುನರ್ ನಿರ್ಮಿಸಬೇಕು. ಆ ಮೂಲಕ ನಮಗೆ ನ್ಯಾಯ ಒದಗಿಸಿಕೊಡಬೆೀಕು ಎಂದು ಅವರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News