ಬಡ ಕುಟುಂಬಕ್ಕೆ ಉಚಿತ ವಿದ್ಯುತ್ ಸಂಪರ್ಕ
Update: 2020-10-01 12:23 GMT
ಮಣಿಪಾಲ, ಅ.1: ಆರ್ಥಿಕವಾಗಿ ಹಿಂದುಳಿದ ಮಣಿಪಾಲ ಪ್ರಗತಿನಗರದ ಲಕ್ಷ್ಮೀ ದೊಡ್ಡಮನಿ ಅವರ ಮನೆಗೆ ಉಚಿತ ವಿದ್ಯುತ್ ಸಂಪರ್ಕವನ್ನು ಉಡುಪಿ ನಾಯಕ ಎಲೆಟ್ರಿಕ್ಸ್ ಮಾಲಕ ರವೀಂದ್ರ ನಾಯಕ ಹಾಗೂ ಸೀಮಾ ಎಲೆಟ್ರಿಕ್ಸ್ ಮಾಲಕ ಪ್ರಶಾಂತ್ ಅಂಚನ್ ಪ್ರಾಯೋಜಕತ್ವದಲ್ಲಿ ನೀಡಲಾಯಿತು.
ವಿದ್ಯುತ್ ಸಂಪರ್ಕವನ್ನು ಇಂದು ಮಣಿಪಾಲ ಮೆಸ್ಕಾಂ ಕಾರ್ಯ ನಿರ್ವಾಹಕ ಅಧಿಕಾರಿ ಮಾರ್ತಾಂಡಪ್ಪಉದ್ಘಾಟಿಸಿದರು. ಅಲೆವೂರು ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಶೇರಿಗಾರ್, ಶ್ರೀಧರ್ ಮಣಿಪಾಲ, ಪುರೋಷೋತ್ತಮ್, ತಿಲಕ, ಕೃಷ್ಣ ಮೂರ್ತಿ ವಿಶ್ವನಾಥ, ವೆುಸ್ಕಾಂ ಸಿಬ್ಬಂದಿ ಉಪಸ್ಥಿತರಿದ್ದರು.