​ಬೈಕ್‌ಗಳ ಮಧ್ಯೆ ಅಪಘಾತ: ಸಹಸವಾರ ಮೃತ್ಯು

Update: 2020-10-01 16:11 GMT

ಬ್ರಹ್ಮಾವರ, ಅ.1: ಆರೂರು ಕೀರ್ತಿನಗರ ಹಂದಿಗುಳಿ ಕ್ರಾಸ್ ಬಳಿ ಸೆ.30 ರಂದು ಸಂಜೆ ವೇಳೆ ಸಂಭವಿಸಿದ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಓರ್ವ ಸವಾರ ಮೃತಪಟ್ಟ ಬಗ್ಗೆ ವರದಿಯಾಗಿದೆ.

ಮೃತರನ್ನು ಸಹಸವಾರ ಅಲ್ಬಾಡಿ ಆರ್ಡಿಯ ರಾಮ ನಾಯ್ಕ ಎಂದು ಗುರು ತಿಸಲಾಗಿದೆ. ಮೃತರ ಮಗ, ಬೈಕ್ ಸವಾರ ಚಂದ್ರ ನಾಯ್ಕ(37) ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಇವರಿಬ್ಬರು ಉಪ್ಪೂರಿನಲ್ಲಿ ತೋಟದ ಕೆಲಸ ಮುಗಿಸಿಕೊಂಡು ಬೈಕಿನಲ್ಲಿ ಕೊಕ್ಕರ್ಣೆ ಕಡೆಗೆ ಹೋಗುತ್ತಿದ್ದಾಗ ಎದುರಿನಲ್ಲಿದ್ದ ದಿನೇಶ್ ಎಂಬವರು ತನ್ನ ಬೈಕನ್ನು ಒಮ್ಮೇಲೆ ಬಲಕ್ಕೆ ತಿರುಗಿಸಿದರೆನ್ನಲಾಗಿದೆ.

ಇದರಿಂದ ಚಂದ್ರ ನಾಯ್ಕರ ಬೈಕ್, ಎದುರಿನ ಬೈಕಿಗೆ ತಾಗಿ ರಸ್ತೆಗೆ ಬಿತ್ತೆನ್ನ ಲಾಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ರಾಮ ನಾಯ್ಕ ರಾತ್ರಿ 10 ಗಂಟೆ ಸುಮಾರಿಗೆ ಮಣಿಪಾಲದ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News