ಅ.17: ಬೇಕಲ್ ಉಸ್ತಾದರ ಜಿಲ್ಲಾಮಟ್ಟದ ಪ್ರಾರ್ಥನಾ ಮಜ್ಲಿಸ್, ಅನುಸ್ಮರಣಾ ಸಂಗಮ

Update: 2020-10-01 16:20 GMT

ಉಡುಪಿ, ಅ.1: ಉಡುಪಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಖಾಝಿ ಯಾಗಿದ್ದ ತಾಜುಲ್ ಫುಖಹಾಅ ಖಾಝಿ ಪಿ.ಎಂ.ಇಬ್ರಾಹಿಂ ಮುಸ್ಲಿಯಾರ್ ಬೇಕಲ ಉಸ್ತಾದರ ಹೆಸರಿನಲ್ಲಿ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ವತಿಯಿಂದ ಜಿಲ್ಲಾಮಟ್ಟದ ಪ್ರಾರ್ಥನಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮವನ್ನು ಅ.17ರಂದು ಬೆಳಗ್ಗೆ 10:30ಕ್ಕೆ ಮೂಳೂರು ಕೇಂದ್ರ ಮಸೀದಿಯಲ್ಲಿ ಹಮ್ಮಿ ಕೊಳ್ಳಲಾಗಿದೆ.

ಬೇಕಲ್ ಉಸ್ತಾದರ ನಿಧನದಿಂದ ತೆರವಾದ ಖಾಝಿ ಸ್ಥಾನಕ್ಕೆ ಉಲಮಾ ನಾಯಕರು ಹಾಗೂ ಜಿಲ್ಲಾ ಸುನ್ನಿ ಸಂಯುಕ್ತ ಜಮಾಅತ್ ಸೂಕ್ತವಾದ ನಿರ್ಧಾರ ತೆಗೆದುಕೊಂಡು ಉನ್ನತ ವಿದ್ವಾಂಸರನ್ನು ಅತಿ ಶೀಘ್ರದಲ್ಲಿ ಖಾಝಿ ಸ್ವೀಕಾರ ಮಾಡಲಾಗುವುದೆಂದು ಜಮಾಅತ್ ಅಧ್ಯಕ್ಷ ಹಾಜಿ ಪಿ.ಅಬೂಬಕ್ಕರ್ ನೇಜಾರು ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಈ ತೀರ್ಮಾನವನ್ನು ಕೈ ಗೊಳ್ಳಲಾಯಿತು.

ಸಂಯುಕ್ತ ಜಮಾಅತ್ ನಾಯಕರಾದ ಬಿ.ಎ.ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಯು.ಕೆ.ಮುಸ್ತಫ ಸಅದಿ, ಅಶ್ರಫ್ ಸಖಾಫಿ ಕನ್ನಂಗಾರ್, ಕೆ.ಎ. ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಜಿಲ್ಲಾ ಉಪಾಧ್ಯಕ್ಷ ಮನ್ಸೂರ್ ಮೆಕ್ಕಾಸ್, ಜಿಲ್ಲಾ ಕೋಶಾಧಿಕಾರಿ ಹಂಝ ಕರ್ಕಿ ಗುಲ್ವಾಡಿ, ಮೂಳೂರು ಕೇಂದ್ರ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ಮೂಳೂರು, ಅಶ್ರಫ್ ಅಂಜದಿ, ಪಿ.ಎಚ್.ಉಸ್ಮಾನ್ ಕೆರೆಬಳಿ, ಅಬ್ದುಲ್ ಹಮೀದ್ ಅದ್ದು, ಹಾಜಿ ಮೊಯ್ದಿನ್ ಗುಡ್ವಿಲ್, ನಾಸಿರ್ ಮೂಡುಗೋಪಾಡಿ, ವೈಬಿಸಿ ಬಾವ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಹಾಜಿ ಎಂ.ಎ.ಬಾವು ಮೂಳೂರು ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News