ಕೊಲ್ಲರಕೋಡಿ: ಬೇಕಲ್ ಉಸ್ತಾದ್ ಅನುಸ್ಮರಣಾ ಸಂಗಮ

Update: 2020-10-03 14:28 GMT

ಕೊಲ್ಲರಕೋಡಿ: ನೂರುಲ್ ಹುದಾ ಮಸ್ಜಿದ್ ತಖ್ವಾ, ಎಸ್ವೈಎಸ್ ಮತ್ತು ಎಸ್ಸೆಸ್ಸೆಫ್ ಕೊಲ್ಲರಕೋಡಿ ಘಟಕದ ವತಿಯಿಂದ ಬೇಕಲ್ ಉಸ್ತಾದ್ ಅನುಸ್ಮರಣಾ ಸಂಗಮವು ಕೊಲ್ಲರಕೋಡಿ ನೂರುಲ್ ಹುದಾ ಮಸ್ಜಿದ್ ತಖ್ವಾದಲ್ಲಿ ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ನಡೆಸಲಾಯಿತು.

ಝಕರಿಯ ಫೈಝಿ ಝಿಕ್ರ್ ನೇತೃತ್ವ ವಹಿಸಿದರು. ಮುಹಮ್ಮದ್ ಸಖಾಫಿ ಪಾತೂರ್ ಅನುಸ್ಮರಣಾ ಭಾಷಣ ನಡೆಸಿದರು.

ಕಾರ್ಯಕ್ರಮದಲ್ಲಿ ಬೇಕಲ್ ಉಸ್ತಾದ್ ಪುತ್ರರಾದ ಅಬ್ದುಲ್ ಜಲೀಲ್, ಅಬ್ದುಲ್ ನಾಸಿರ್ ಸಅದಿ ಬಾಗವಹಿಸಿದರು.

ಈ ಸಂದರ್ಭ ಬೇಕಲ್ ಉಸ್ತಾದರ ಖಾದಿಂ ಇಸ್ಹಾಖ್ ಬಾಹಸನಿ, ನೂರುಲ್ ಹುದಾ ಮಸ್ಜಿದ್ ತಖ್ವಾ ಅಧ್ಯಕ್ಷ ಇಬ್ರಾಹಿಂ ಕುಂಞಿ ಹಾಜಿ ಪಾರೆ, ಎಸ್ಸೆಸ್ಸೆಫ್ ಮುಡಿಪು ಡಿವಿಷನ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ, ಕೊಲ್ಲರಕೋಡಿ ಮದರಸ ಸದರ್ ಯಾಕೂಬ್ ಲತೀಫಿ, ಮುಅಲ್ಲಿಂ ಅಬೂಬಕರ್ ಸಅದಿ, ಬಾತಿಶ್ ಹಿಮಾಮಿ,  ಖಾಸಿಂ ಲತೀಫಿ, ಆಸಿಫ್ ಕೆ.ಎಚ್, ಅನೀಸ್ ಬಳಪು, ಸಾಬಿತ್ ಪಾರೆ, ಅಮೀದ್ ತಟ್ಲ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News