ಸಜಿಪನಡು: ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಖಂಡಿಸಿ ಮೊಂಬತ್ತಿ ಪ್ರತಿಭಟನೆ

Update: 2020-10-03 18:27 GMT

ಬಂಟ್ವಾಳ, ಅ.3: ಉತ್ತರ ಪ್ರದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಹಾಗೂ ಸಾಮೂಹಿಕ ಅತ್ಯಾಚಾರವನ್ನು ಖಂಡಿಸಿ ಟಿಪ್ಪು ಯೂತ್ ಫೆಡರೇಶನ್ ಸಜಿಪನಡು ಇದರ ವತಿಯಿಂದ ಮೊಂಬತ್ತಿ ಪ್ರತಿಭಟನೆ ಸಜಿಪನಡು ಜಂಕ್ಷನ್ ನಲ್ಲಿ ನಡೆಯಿತು.

ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಮಹಿಳೆಯರ ಮೇಲಿನ ದೌರ್ಜನ್ಯ, ಸಾಮೂಹಿಕ ಅತ್ಯಾಚಾರಗಳು ನಡೆಯುತ್ತಿವೆ. ಇತ್ತೀಚಿಗೆ ಹತ್ರಸ್ ನ ಪ್ರಕರಣವನ್ನು ಉ.ಪ್ರ ಪೊಲೀಸರು ನಿರ್ವಹಿಸಿದ ರೀತಿ ಹಾಗೂ ಮೃತದೇಹವನ್ನು ಕುಟುಂಬದ ಒಪ್ಪಿಗೆ ಇಲ್ಲದೆ ಅಂತ್ಯಕ್ರಿಯೆ ನಡೆಸಿರುವ ಕ್ರಮವನ್ನು ಖಂಡನೀಯ.ಕೂಡಲೇ ಬಿಜೆಪಿ ನೇತೃತ್ವದ ಯೋಗಿ ಸರಕಾರವನ್ನು ವಜಾಗೊಳಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News