ಬೆಳ್ತಂಗಡಿ: ಕೆಲಸ ಮಾಡುತ್ತಿದ್ದ ವೇಳೆ ತಲೆಗೆ ಕಲ್ಲು ಬಿದ್ದು ಯುವ ಕಲಾವಿದ ಮೃತ್ಯು

Update: 2020-10-04 17:06 GMT
ರಾಘವೇಂದ್ರ ಆಚಾರ್ಯ

ಬೆಳ್ತಂಗಡಿ, ಅ.4: ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ಕಲ್ಲು ಜಾರಿ ತಲೆಯ ಮೇಲೆ ಬಿದ್ದು ಯುವ ಕಲಾವಿದನೋರ್ವ ಮೃತಪಟ್ಟ ಘಟನೆ ತಾಲೂಕಿನ ನಾವರ ಎಂಬಲ್ಲಿ ರವಿವಾರ ನಡೆದಿದೆ. ರಾಘವೇಂದ್ರ ಆಚಾರ್ಯ(38) ಮೃತಪಟ್ಟವರು.

ತುಳು ರಂಗ ಕಲಾವಿದರಾಗಿರುವ ಇವರು ಬೆಳ್ತಂಗಡಿ ತಾಲೂಕಿನ ನಾವರ ಗ್ರಾಮದ ಗೊಳಿಕಟ್ಟೆ ನಿವಾಸಿ. ಇವರು ಹಲವು ವರ್ಷಗಳಿಂದ ಕಲ್ಲಿನ ಕೆತ್ತನೆಯ ಕೆಲಸ ಮಾಡುತ್ತಿದ್ದು, ಇಂದು ಕೂಡ ಕೆಲಸದಲ್ಲಿ ನಿರತರಾಗಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ. ಕಲ್ಲೊಂದು ಆಕಸ್ಮಿಕವಾಗಿ ಜಾರಿ ಇವರ ತಲೆ ಮೇಲೆ ಬಿದ್ದಿದ್ದು, ಇದರಿಂದ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದರೆನ್ನಲಾಗಿದೆ.

ತುಳು ಚಲನಚಿತ್ರದಲ್ಲಿ ನಟನೆ ಮಾಡಿದ್ದ ಇವರು ತುಳು ರಂಗಭೂಮಿಯಲ್ಲಿಯೂ, ಕಲಾವಿದರಾಗಿ ಗಮನ ಸೆಳೆದಿದ್ದರು. ಜ್ಯೂನಿಯರ್ ದೇವದಾಸ್ ಕಾಪಿಕಾಡ್ ಎಂದೇ ಖ್ಯಾತಿಪಡೆದಿದ್ದರು.

ಮೃತರು ತಾಯಿ, ಪತ್ನಿ, ಇಬ್ಬರು ಮಕ್ಕಳು, ಸಹೋದರ, ಸಹೋದರಿಯನ್ನು ಆಗಲಿದ್ದಾರೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News