ಮಹಿಳೆಯ ಚಿನ್ನದ ಸರ ಅಪಹರಣ

Update: 2020-10-05 15:02 GMT

ಕಾರ್ಕಳ, ಅ.4: ವಿಳಾಸ ಕೇಳುವ ನೆಪದಲ್ಲಿ ಬೈಕಿನಲ್ಲಿ ಬಂದ ಅಪರಿಚಿತ ರಿಬ್ಬರು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿ ಪರಾರಿಯಾಗಿ ರುವ ಘಟನೆ ಅ.5ರಂದು ಬೆಳಗ್ಗೆ  ಎರ್ಲಪಾಡಿ ಗ್ರಾಮದ ಶಿವಬೆಟ್ಟು ಎಂಬಲ್ಲಿ ನಡೆದಿದೆ.

ಸಾಲ್ಮರದ ಕಮಲ ನಾಯಕ್(77) ಎಂಬವರು ಶಿವಬೆಟ್ಟು ಖಾಸಗಿ ಹಾಡಿ ಪ್ರದೇಶಕ್ಕೆ ದನವನ್ನು ಮೇಯಲು ಕರೆದುಕೊಂಡು ಹೋಗುತ್ತಿದ್ದಾಗ ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು, ಕಮಲ ಅವರ ಬಳಿ ವಿಳಾಸ ಕೇಳಿದರೆನ್ನ ಲಾಗಿದೆ. ವಿಳಾಸ ಹೇಳುವ ವೇಳೆ ಕಮಲರ ಕುತ್ತಿಗೆ ಯಲ್ಲಿದ್ದ ಸುಮಾರು 2 ಪವನ್ ತೂಕದ ಚಿನ್ನದ ಸರವನ್ನು ಎಳೆದುಕೊಂಡು ಬಂದ ಬೈಕಿನಲ್ಲಿ ಪರಾರಿ ಯಾದರು. ಸರದ ಮೌಲ್ಯ ಸುಮಾರು 50,000ರೂ. ಎಂದು ಅಂದಾಜಿಸ ಲಾಗಿದೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News