ಯುವಕ ನಾಪತ್ತೆ
Update: 2020-10-05 15:04 GMT
ಶಂಕರನಾರಾಯಣ, ಅ.5: ಸಿದ್ದಾಪುರ ಗ್ರಾಮದ ಜಡ್ಡಿನಬೈಲ್ಲು ನಿವಾಸಿ ಅಶೋಕ ಕುಮಾರ್ ಶೆಟ್ಟಿ ಎಂಬವರ ಮಗ ಅರ್ಜುನ್(23) ಎಂಬವರು ಅ.3ರಂದು ಬೆಳಗ್ಗೆ ಮನೆಯಿಂದ ಮಣಿಪಾಲಕ್ಕೆ ಹೋಗಿ ಮೊಬೈಲ್ ರಿಪೇರಿ ಮಾಡಿಕೊಂಡು ಬರುವುದಾಗಿ ಹೇಳಿ ಸ್ಕೂಟಿಯಲ್ಲಿ ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.