ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: 9 ಮಂದಿ ಬಂಧನ

Update: 2020-10-06 15:51 GMT

ಕುಂದಾಪುರ, ಅ. 6: ಕೋಟೇಶ್ವರ ಗ್ರಾಮದ ಕುಂಬ್ರಿ ಜಂಕ್ಷನ್ ಬಳಿ ಅ. 5 ರಂದು ಸಂಜೆ ರಾತ್ರಿ 8ಗಂಟೆ ಸುಮಾರಿಗೆ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದ 9 ಮಂದಿಯನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕೋಟೇಶ್ವರ ಮಠದಬೆಟ್ಟುವಿನ ಪ್ರಸಾದ್ ಆಚಾರಿ(29), ಸಚಿನ್ ಆಚಾರಿ (30), ಬೀಜಾಡಿಯ ಶರತ್(28), ಸುಧಾಕರ(35), ದೊಡ್ಡೋಣಿ ರಸ್ತೆಯ ಸಂತೋಷ(36), ಕಮ್ತಿಯಾರ್‌ಬೆಟ್ಟುವಿನ ಪ್ರಶಾಂತ್(29), ಕುಂಭಾಶಿಯ ಪುರಂದರ(40), ಚಾತ್ರಬೆಟ್ಟುವಿನ ಹರೀಶ(29), ಕೊರವಡಿಯ ಪ್ರಸಾದ್ ಪೂಜಾರಿ(25) ಬಂಧಿತ ಆರೋಪಿಗಳು.

ಇವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಕ್ರಿಕೆಟ್ ಪಂದ್ಯದ ಮೇಲೆ ಹಣವನ್ನು ಪಣವಾಗಿಟ್ಟು ಬೆಟ್ಟಿಂಗ್ ನಡೆಸುತ್ತಿರುವ ಕುರಿತ ಖಚಿತ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಬಂಧಿತರಿಂದ 17,000ರೂ. ನಗದು, ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News