ಸಮುದ್ರಕ್ಕೆ ಬಿದ್ದು ಮೀನುಗಾರ ಮೃತ್ಯು

Update: 2020-10-07 16:40 GMT

ಮಲ್ಪೆ, ಅ. 7: ಮೀನುಗಾರಿಕೆಗೆ ತೆರಳಿದ್ದ ಮೀನುಗಾರರೊಬ್ಬರು ಅಕಸ್ಮಿಕವಾಗಿ ಬೋಟಿನಿಂದ ನೀರಿಗೆ ಬಿದ್ದು ಮೃತಪಟ್ಟ ಬಗ್ಗೆ ಘಟನೆ ಮಲ್ಪೆ ಬಾಪುತೋಟ ಮೂರನೆ ಹಂತದ ದಕ್ಕೆ ಸಮೀಪದ ಸಮುದ್ರದಲ್ಲಿ ನಡೆದಿದೆ.

ಮೃತರನ್ನು ಗಣೇಶ(42) ಎಂದು ಗುರುತಿಸಲಾಗಿದೆ. ಇವರು ಅ.5ರಂದು ರಾತ್ರಿ 9ಗಂಟೆ ಸುಮಾರಿಗೆ ಇತರ ಮೀನುಗಾರರೊಂದಿಗೆ ಕಟಪಾಡಿ ಸದಾನಂದ ಕಾಂಚನ್ ಎಂಬವರ ಸಿಂದೂರ ಗಣಪತಿ ಬೋಟಿನಲ್ಲಿ ತೆರಳುತ್ತಿದ್ದಾಗ ಅಕಸ್ಮಿಕ ವಾಗಿ ಕಾಲು ಜಾರಿ ದಕ್ಕೆು ನೀರಿಗೆ ಬಿದ್ದು ನಾಪತ್ತೆ ಯಾಗಿದ್ದರು. ಹುಡುಕಾಡಿ ದಾಗ ಮೃತದೇಹವು ಅ.6ರಂದು ಮಧ್ಯಾಹ್ನ ಪತ್ತೆಯಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News