ಎಸ್ಸೆಸ್ಸೆಫ್, ಎಸ್‌ವೈಎಸ್ ಬಡಕಬೈಲ್ ವತಿಯಿಂದ ಬೇಕಲ್ ಉಸ್ತಾದ್ ಅನುಸ್ಮರಣಾ ಸಂಗಮ

Update: 2020-10-07 17:40 GMT

ಬಡಕಬೈಲ್: ಇತ್ತೀಚೆಗೆ ಅಗಲಿದ ರಾಜ್ಯ ಜಂಇಯತುಲ್ ಉಲಮಾ ಅಧ್ಯಕ್ಷ, ಹಿರಿಯ ವಿದ್ವಾಂಸ, ಖಾಝಿ ತಾಜುಲ್ ಫುಖಹಾಹ್ ಬೇಕಲ್ ಉಸ್ತಾದರ ಅನುಸ್ಮರಣಾ ಸಂಗಮ ಎಸ್ಸೆಸ್ಸೆಫ್ ಹಾಗೂ ಎಸ್‌ವೈಎಸ್ ಬಡಕಬೈಲ್ ವತಿಯಿಂದ ಇತ್ತೀಚಿಗೆ ಎಸ್‌ವೈಎಸ್ ಬಡಕಬೈಲ್ ಬ್ರಾಂಚ್ ಅಧ್ಯಕ್ಷ ಇಸ್ಮಾಈಲ್ ಮುಸ್ಲಿಯಾರ್ ಅವರ ನಿವಾಸದಲ್ಲಿ ನಡೆಯಿತು.

ಇಸ್ಮಾಈಲ್ ಮುಸ್ಲಿಯಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಎಮ್ ಬಡಕಬೈಲ್ ಖತೀಬ್ ಇಲ್ಯಾಸ್ ಸಅದಿ ದುಆ ಹಾಗೂ ಉದ್ಘಾಟನೆಯನ್ನು ನೆರವೇರಿಸಿದರು. ಎಸ್‌ವೈಎಸ್ ದ.ಕ ಜಿಲ್ಲಾ ದಅವಾ ಹಾಗೂ ಶಿಕ್ಷಣ ವಿಭಾಗ ಕಾರ್ಯದರ್ಶಿ ಬದ್ರುದ್ದೀನ್ ಅಝ್ಹರಿ ಹಾಗೂ ಮಜ್ಲಿಸ್ ಗಾಣೆಮಾರ್ ಸಾರಥಿ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಅಲ್ ಕಾಮಿಲ್ ಅನುಸ್ಮರಣಾ ಭಾಷಣ ನಡೆಸಿದರು.

ಎಸ್‌ವೈಎಸ್ ಅಮ್ಮುಂಜೆ ಸೆಂಟರ್ ಕಾರ್ಯದರ್ಶಿ ಅಹ್ಮದ್ ಬಶೀರ್, ದಅವಾ ಕಾರ್ಯದರ್ಶಿ ಹಮೀದ್ ಬದ್ರಿಯಾ ನಗರ, ಎಸ್‌ವೈಎಸ್ ಅಮ್ಮುಂಜೆ ಸೆಂಟರ್ ಇಸಾಬ ಕಾರ್ಯದರ್ಶಿ & ಬಡಕಬೈಲ್ ಬ್ರಾಂಚ್ ಉಪಾಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್, ಎಸ್‌ವೈಎಸ್ ಅಮ್ಮುಂಜೆ ಬ್ರಾಂಚ್ ಅಧ್ಯಕ್ಷ ಇಕ್ಬಾಲ್, ಅಶ್ರಫ್ ಮದನಿ, ಹಾರಿಸ್ ಸಖಾಫಿ, ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯ ನಮಾಝ್ ಕುಟ್ಟಿಕಳ, ಬೆಂಗಳೂರಿನಲ್ಲಿ ಪಿಡಿಓ ಆಗಿ ಸೇವೆ ಸಲ್ಲಿಸುತ್ತಿರುವ ಉಸ್ಮಾನ್ ಕುಟ್ಟಿಕಳ, ಬದ್ರಿಯಾ ನಗರ ಮಸೀದಿ ಮಾಜಿ ಅಧ್ಯಕ್ಷ ಅಬೂಬಕ್ಕರ್ ಸೇರಿ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಬಡಕಬೈಲ್ ಶಾಖಾಧ್ಯಕ್ಷ ಸೈಫುಲ್ಲಾ ಸಖಾಫಿ ಸ್ವಾಗತಿಸಿ, ಕಾರ್ಯದರ್ಶಿ ಇರ್ಫಾನ್ ಫಾಳಿಲಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News