​ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್: ಏಳು ಮಂದಿ ಬಂಧನ

Update: 2020-10-09 15:05 GMT

ಶಂಕರನಾರಾಯಣ, ಅ.9: ಹಣವನ್ನು ಪಣವಾಗಿರಿಸಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ಜುಗಾರಿ ನಡೆಸುತ್ತಿದ್ದ ಏಳು ಮಂದಿಯನ್ನು ಶಂಕರನಾರಾಯಣ ಪೊಲೀಸರು ಅ.8ರಂದು ಸಿದ್ದಾಪುರ ಮಾರ್ಕೆಟ್ ಬಳಿ ಬಂಧಿಸಿದ್ದಾರೆ.

ಬಂಧಿತರನ್ನು ಸಿದ್ಧಾಪುರದ ಸುಬ್ರಹ್ಮಣ್ಯ ಕೊಠಾರಿ(36), ಸಂತೋಷ ಶೆಟ್ಟಿ (26), ಕಿರಣ್ ಪೂಜಾರಿ(19), ವಿವೇಕ ಶೆಟ್ಟಿ(29), ಜಯ ಶೆಟ್ಟಿ(36), ಉಳ್ಳೂರಿನ ಅಕ್ಷಯ ಪೂಜಾರಿ(23), ಶಿಕಾರಿಪುರದ ಅ್ಸರ್(25) ಎಂದು ಗುರುತಿಸಲಾಗಿದೆ.

ಇವರೆಲ್ಲ ಅಕ್ರಮವಾಗಿ ಗುಂಪುಗೂಡಿಕೊಂಡು ಐಪಿಎಲ್ ತಂಡಗಳಾದ ಹೈದ್ರಾಬಾದ್ ಸನ್‌ರೈಸಸ್ ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡ ಗಳ ಮಧ್ಯೆ ಕ್ರಿಕೆಟ್ ಬೆಟ್ಟಿಂಗ್ ಜುಗಾರಿ ಆಟ ಆಡುತ್ತಿದ್ದರೆನ್ನಲಾಗಿದೆ. ಬಂಧಿತರಿಂದ ಒಂದು ಮೊಬೈಲು, 3,300ರೂ. ನಗದು ಹಣವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News