ಕಾಸರಗೋಡು : ಕೊರೋನ ಭೀತಿ; ಅ.16ರ ತನಕ 144 ನಿಷೇಧಾಜ್ಞೆ ಮುಂದುವರಿಕೆ; ಜಿಲ್ಲಾಧಿಕಾರಿ

Update: 2020-10-09 16:56 GMT

ಕಾಸರಗೋಡು : ಸಂಪರ್ಕದಿಂದ  ಕೊರೋನ  ಹರಡುತ್ತಿರುವ   ಹಿನ್ನಲೆಯಲ್ಲಿ  ಮಂಜೇಶ್ವರ ,  ಕುಂಬಳೆ, ಬದಿಯಡ್ಕ, ಕಾಸರಗೋಡು, ವಿದ್ಯಾನಗರ, ಮೇಲ್ಪರಂಬ, ಬೇಕಲ, ಹೊಸದುರ್ಗ, ನೀಲೇಶ್ವರ, ಚಂದೇರ ಪೊಲೀಸ್ ಠಾಣಾ ವ್ಯಾಪ್ತಿ ಹಾಗೂ ಪರಪ್ಪ , ಒಡೆಯಂಚಾಲ್  , ಪನತ್ತಡಿ  ಪೇಟೆಗಳಲ್ಲಿ  ವಿಧಿಸಲಾಗಿದ್ದ  144 ನಿಷೇಧಾಜ್ಞೆಯನ್ನು  ಅಕ್ಟೋಬರ್ 16 ರ ತನಕ ವಿಸ್ತರಿಸಿ ಜಿಲ್ಲಾಧಿಕಾರಿ  ಡಾ . ಡಿ . ಸಜಿತ್ ಬಾಬು ಆದೇಶ ನೀಡಿದ್ದಾರೆ .

ಕೊರೋನ  ಸೋಂಕು  ಹರಡುತ್ತಿದ್ದು ,  ಈ ಹಿನ್ನಲೆಯಲ್ಲಿ  ಕೇರಳದಲ್ಲಿ  ಅಕ್ಟೋಬರ್ 3 ರಿಂದ 31 ರ ತನಕ ನಿಷೇಧಾಜ್ಞೆ ಜಾರಿಗೆ ತರಲಾಗಿದ್ದು , ಕಾಸರಗೋಡಿನಲ್ಲಿ ನಿಷೇಧಾಜ್ಞೆ ಯಲ್ಲಿ ಅಲ್ಪ ವಿನಾಯಿತಿ ನೀಡಲಾಗಿತ್ತು .  ಮೊದಲ ಹಂತದಲ್ಲಿ ಅ. 9  ರ ತನಕ  ನಿಷೇಧಾಜ್ಞೆ ಘೋಷಿಸಲಾಗಿತ್ತು . ಸೋಂಕು ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ  ಅ.16 ರ ತನಕ ವಿಸ್ತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News