ಭಟ್ಕಳ : ಪಾರಿವಾಳ ಕಳವು ಪ್ರಕರಣ ; ಆರೋಪಿ ಸೆರೆ

Update: 2020-10-09 17:26 GMT

ಭಟ್ಕಳ: ದುಬಾರಿ ಬೆಲೆಯ ಲಾಹೂರಿ ತಳಿಯ 25 ಪಾರಿವಾಳಗಳು ಇಲ್ಲಿನ ಆಝಾದ್ ನಗರ ಪಾರಿವಾಳ ಸಾಕಾಣಿಕಾ ಕೇಂದ್ರದಿಂದ ಕಳವಾಗಿರುವ ಕುರಿತು ಅ. 5 ರಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳವು ಆರೋಪಿಗಳನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ತಮಿಳುನಾಡು ಮೂಲದ ಪನ್ನೀರ್ ಸೇಲ್ವಂ ಎಂದು ಗುರುತಿಸಲಾಗಿದ್ದು, ಸುಮಾರು 15 ಲಕ್ಷ ರೂ. ಮೌಲ್ಯದ 18 ಪಾರಿವಾಳಗಳನ್ನು ವಶಪಡಿಸಿಕೊಳ್ಳಲಾಗಿದೆ. ಅ.5 ರಂದು ಆಝಾದ್ ನಗರದ ಪಾರಿವಾಳ ಸಾಕಾಣಿಕಾ ಕೇಂದ್ರದಲ್ಲಿರುವ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿರುವ ಕಳವು ದೃಶ್ಯಗಳನ್ನಾಧರಿಸಿ ಪಾರಿವಾಳ ಸಾಕಾಣಿಕೆದಾರ ಅಫ್ಝಲ್ ಕಾಶಿಮಜಿ ಪೊಲೀಸರಿಗೆ ದೂರು ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News