ಉಡುಪಿ: ರಿಕ್ಷಾದಲ್ಲಿ ಬಿಟ್ಟುಹೋದ 50ಸಾವಿರ ರೂ. ಮರಳಿಸಿ ಪ್ರಾಮಾಣಿಕತೆ ಮೆರೆದ ಚಾಲಕ

Update: 2020-10-14 12:41 GMT

ಕಾಪು, ಅ.14: ಕಟಪಾಡಿ ಸಮೀಪದ ಕುರ್ಕಾಲಿನ ಮಹಿಳೆಯೊಬ್ಬರು ಪ್ರಯಾಣದ ವೇಳೆ ಆಟೋ ರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದ 50ಸಾವಿರ ರೂ. ಹಣವನ್ನು ಮರಳಿಸುವ ಮೂಲಕ ಚಾಲಕ ಅಂಬಲಪಾಡಿಯ ಜಯ ಶೆಟ್ಟಿ ಪ್ರಾಮಾಣಿಕತೆ ಮೆರೆದಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಕುರ್ಕಾಲಿನಿಂದ ಕಟಪಾಡಿ ಪೇಟೆಗೆ ಆಟೋರಿಕ್ಷಾದಲ್ಲಿ ಪ್ರಯಾಣಿಸಿದ ಮಹಿಳೆ, ಕಟಪಾಡಿ ಬಸ್ ನಿಲ್ದಾಣದಲ್ಲಿ ಇಳಿಯುವ ಸಂದರ್ಭ ಗಡಿಬಿಡಿಯಲ್ಲಿ 50ಸಾವಿರ ರೂ. ಹಣವನ್ನು ಮರೆತು ಬಿಟ್ಟುಹೋಗಿದ್ದರು. ಇದನ್ನು ಗಮನಿಸದ ರಿಕ್ಷಾ ಚಾಲಕ ಜಯ ಶೆಟ್ಟಿ, ಉಡುಪಿ ಅಂಬಲಪಾಡಿಯಲ್ಲಿರುವ ಅಟೋ ನಿಲ್ದಾಣಕ್ಕೆ ಬಂದಿದ್ದರು.

ಅಲ್ಲಿ ತನ್ನ ರಿಕ್ಷಾದ ಹಿಂಬದಿ ಸೀಟಿನ ಅಡಿಯಲ್ಲಿ ಪ್ಲಾಸ್ಟಿಕ್ ಕವರೊಂದು ಕಂಡುಬಂತು. ಅದನ್ನು ಪರಿಶೀಲಿಸಿದಾಗ ಅದರಲ್ಲಿ 50ಸಾವಿರ ರೂ. ಹಣ ಇರುವುದು ತಿಳಿಯಿತು. ಆ ಕೂಡಲೇ ಜಯ ಶೆಟ್ಟಿ, ಕಟಪಾಡಿಗೆ ತೆರಳಿ, ಮಹಿಳೆಯನ್ನು ಸಂಪರ್ಕಿಸಿ, 50 ಸಾವಿರ ರೂ. ಹಣವನ್ನು ಮರಳಿಸಿ ಪ್ರಾಮಾಣಕತೆ ಮೆರೆದರು. ಇವರ ಈ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News