ಅ.16ರಂದು ಉಪ್ಪುಂದ ವಲಯ ಮೀನುಗಾರರ ಸಮಾವೇಶ

Update: 2020-10-14 15:46 GMT

ಬೈಂದೂರು, ಅ.14: ಉಡುಪಿ ಜಿಲ್ಲಾ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಂಘದ ಆಶ್ರಯದಲ್ಲಿ ಉಪ್ಪುಂದ ವಲಯದ ಮೀನುಗಾರರ ಮತ್ತು ಮೀನು ಕಾರ್ಮಿಕರ ಸಮಾವೇಶವು ಅ.16ರಂದು ಮಧ್ಯಾಹ್ನ 2.30ಕ್ಕೆ ಉಪ್ಪುಂದ ಸರಕಾರಿ ಪದವಿ ಪೂರ್ವ ಕಾಲೇಜು ಸಮೀಪದ ನಾಡ ದೋಣಿ ಮೀನುಗಾರರ ಸಂಘದ ಕಚೇರಿಯ ಸಭಾಂಗಣದಲ್ಲಿ ನಡೆಯಲಿದೆ.

ಈ ಸಭೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಕೆ.ಶಂಕರ್, ಸಿಐಟಿಯು ಕಾರ್ಮಿಕ ಸಂಘದ ಸ್ಥಳೀಯ ಮಖಂಡರಾದ ಮಾಧವ ದೇವಾಡಿಗ, ಶ್ರೀಧರ ಉಪ್ಪುಂದ, ವೆಂಕಟೇಶ್ ಕೋಣಿ, ಸಂಘದ ಉಪ್ಪುಂದ ವಲಯ ಅಧ್ಯಕ್ಷ ರಾಮ ಖಾರ್ವಿ, ಕಾರ್ಯದರ್ಶಿ ವಿಠಲ್ ಖಾರ್ವಿ ಹಾಗೂ ಮಹಿಳಾ ಮೀನುಗಾರರ ಮುಖಂಡೆ ಜ್ಯೋತಿ ಮೊಗವೀರ ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News