ಗೋಪಾಲಪುರ: ಮೂಲಭೂತ ಸೌಕರ್ಯಕ್ಕಾಗಿ ಮನವಿ
Update: 2020-10-16 20:42 IST
ಉಡುಪಿ, ಅ.16: ಉಡುಪಿ ನಗರಸಭೆ ವ್ಯಾಪ್ತಿಯ ಗೋಪಾಲಪುರ ವಾರ್ಡಿನ ತೆಂಕು ನಯಂಪಳ್ಳಿ ಪ್ರದೇಶದ ಮೂಲಭೂತ ಸೌಕರ್ಯ ಒದಗಿಸು ವಂತೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಾಗರಿಕರು ಉಡುಪಿ ನಗರಸಭೆ ಪೌರಾಯುಕ್ತರಿಗೆ ಅ.15ರಂದು ಸಾಮೂಹಿಕ ವಾಗಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಾದ ಹಿರಿಯ ನಾಗರಿಕ ಎಸ್. ಶಾಂತಾರಾಮ ಪೈ, ವಾಲ್ಟರ್ ಸಿರಿಲ್ ಪಿಂಟೊ, ಎಚ್.ಉಮೇಶ ನಾಯಕ್, ಗಣೇಶ ಕೆ.ಸೆಟ್ಟಿಗಾರ್, ಕಿರಣ್ ಗಾಣಿಗ, ಉಮೇಶ ವಿ.ನಾಯಕ್ ಮತ್ತು ಕೋಣಿ ವೆಂಕಟೇಶ್ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.