ಬೋಟಿನಿಂದ ನೀರಿಗೆ ಬಿದ್ದು ಮೀನುಗಾರ ಮೃತ್ಯು

Update: 2020-10-16 16:02 GMT

ಮಲ್ಪೆ, ಅ.16: ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಮಲ್ಪೆ ಬಂದರಿನಲ್ಲಿ ನಿಲ್ಲಿಸಿದ್ದ ಕೇರಳ ರಾಜ್ಯದ ಬೋಟಿನಿಂದ ನೀರಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಮೃತರನ್ನು ಕೇರಳದ ಸಾಜು(45) ಎಂದು ಗುರುತಿಸಲಾಗಿದೆ. ಇವರು ಇತರರ ಮೀನುಗಾರರೊಂದಿಗೆ ಸೆ.25ರಂದು ಕೇರಳದ ಮೊನಂಬ ಬಂದರಿ ನಿಂದ ಮೀನುಗಾರಿಕೆಗೆ ತೆರಳಿದ್ದರು. ಅ.12ರಂದು ಸಮುದ್ರದಲ್ಲಿ ಗಾಳಿಅಬ್ಬರದ ಹಿನ್ನೆಲೆಯಲ್ಲಿ ಬೋಟನ್ನು ಮಲ್ಪೆ ಸಮೀಪ ನಿಲ್ಲಿಸಿದ್ದರು. ಅ.14ರಂದು ರಾತ್ರಿ ಬೋಟಿನಲ್ಲಿದ್ದ ಸಾಜು ಕಾಲು ಜಾರಿ ದಕ್ಕೆಯ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ಅ.15ರಂದು ಮಧ್ಯಾಹ್ನ ವೇಳೆ ಇವರ ಮೃತದೇಹ ಬಂದರಿನ ಸೂಪಿ ದಕ್ಕೆಯ ನೀರಿನಲ್ಲಿ ಪತ್ತೆಯಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News