‘ಯಾರೂ ನಿನಗೆ ಗುಂಡು ಹೊಡೆಯುವುದಿಲ್ಲ’: ಉಗ್ರರ ಜೊತೆ ಸೇರಿದ್ದ ಯುವಕನ ಶರಣಾಗತಿಯ ವಿಡಿಯೋ ವೈರಲ್

Update: 2020-10-16 16:42 GMT

ಶ್ರೀನಗರ: ಸೇನೆಯ ಕಾರ್ಯಾಚರಣೆಯೊಂದರ ವೇಳೆ ಉಗ್ರರ ಜೊತೆ ಸೇರಿದ್ದ ಯುವಕನೊಬ್ಬ ಸೈನಿಕರ ಮುಂದೆ ಶರಣಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶುಕ್ರವಾರ ಈ ವಿಡಿಯೋವನ್ನು ಸೇನೆಯು ಬಿಡುಗಡೆಗೊಳಿಸಿದೆ.

ಕೆಲದಿನಗಳ ಹಿಂದಷ್ಟೇ ಜಹಾಂಗೀರ್ ಭಟ್ ಎಂಬ ಈ ಯುವಕ ಉಗ್ರಗಾಮಿಗಳೊಂದಿಗೆ ಸೇರಿದ್ದ ಎಂದು ತಿಳಿದುಬಂದಿದೆ. ಈತನಿಂದ ಎಕೆ47 ರೈಫಲ್ ಒಂದನ್ನು ವಶಪಡಿಸಿಕೊಳ್ಳಲಾಗಿದೆ.

ಪೊದೆಯೊಂದರಲ್ಲಿದ್ದ ಯುವಕನ ಜೊತೆ ಸೇನೆಯ ಅಧಿಕಾರಿಯೊಬ್ಬರು ಮಾತನಾಡುತ್ತಿರುವುದು ಕೇಳಿಸುತ್ತದೆ. “ಯಾರೂ ನಿನಗೆ ಗುಂಡು ಹೊಡೆಯುವುದಿಲ್ಲ. ನಿನಗೇನು ಆಗುವುದಿಲ್ಲ” ಎಂದು ಸೈನಿಕರೊಬ್ಬರು ಹೇಳುತ್ತಾರೆ. ನಂತರ ಆತ ಕೈಗಳನ್ನು ಮೇಲಕ್ಕೆತ್ತಿ ಸೈನಿಕರ ಸಮೀಪ ಬರುತ್ತಾನೆ. ನಂತರ ಆತನಿಗೆ ನೀರನ್ನು ನೀಡುತ್ತಾರೆ.

ಮತ್ತೊಂದು ವಿಡಿಯೋದಲ್ಲಿ ಯುವಕನ ತಂದೆ ಸೈನಿಕರಿಗೆ ಧನ್ಯವಾದ ಹೇಳುತ್ತಿರುವುದು ಕಾಣಿಸುತ್ತದೆ. ‘ಮತ್ತೊಮ್ಮೆ ಆತ ಉಗ್ರರ ಜೊತೆ ಸೇರುವುದಕ್ಕೆ ಅವಕಾಶ ನೀಡಬೇಡಿ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News