ಹೆರಿಗೆ ವೇಳೆ ರಕ್ತಸ್ರಾವ : ಬಾಣಂತಿ ಸಾವು
Update: 2020-10-16 16:49 GMT
ಪುತ್ತೂರು : ಹೆರಿಗೆ ವೇಳೆಯಲ್ಲಿ ವಿಪರೀತ ರಕ್ತಸ್ರಾವ ಉಂಟಾಗಿ ಬಾಣಂತಿಯೊಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಶುಕ್ರವಾರ ಪುತ್ತೂರು ತಾಲೂಕಿನ ಅರಿಯಡ್ಕ ಗ್ರಾಮದ ಬಳ್ಳಿಕಾನ ಎಂಬಲ್ಲಿಂದ ವರದಿಯಾಗಿದೆ.
ಬಳ್ಳಿಕಾನ ನಿವಾಸಿ ಪ್ರವೀಣ್ ನಾಯ್ಕ್ ಎಂಬವರ ಪತ್ನಿ ಚಂದ್ರಕಲಾ (25) ಮೃತಪಟ್ಟ ಮಹಿಳೆ. ಚಂದ್ರಕಲಾ ಅವರಿಗೆ ಚೊಚ್ಚಲ ಹೆರಿಗೆಯಾಗಿದ್ದು, ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಕ್ತಸ್ರಾವ ಹೆಚ್ಚಾದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ತಿಳಿದು ಬಂದಿದೆ.
ಮೃತ ಚಂದ್ರಕಲಾ ಅವರು ಸುಳ್ಯ ತಾಲೂಕಿನ ಮರ್ಕಂಜ ಗ್ರಾಮದ ಸುಬ್ಬಣ್ಣ ನಾಯ್ಕ ಎಂವರು ಪುತ್ರಿ.