ಪ್ರಗತಿಪರ ರೈತರು, ಕೃಷಿ ವಿಜ್ಞಾನಿ ಅಬ್ದುಲ್‍ ರವೂಫ್ ನಿಧನ

Update: 2020-10-16 17:17 GMT

ಬನವಾಸಿ: ಇಲ್ಲಿನ ಪ್ರಗತಿ ಪರ ರೈತರು, ಕೃಷಿ ವಿಜ್ಞಾನಿ, ವಿಶಾಲ ಹೃದಯಿ ಅಬ್ದುಲ್‍ ರವೂಫ್ ಎ. ಶೇಖ್ ಅವರು ಶುಕ್ರವಾರ ನಿಧನರಾದರು. 

 ಆಧುನಿಕ ಕೃಷಿ ಪದ್ಧತಿಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಕೃಷಿ ರಂಗದಲ್ಲಿ ಅವರು ಸಾಧನೆ ಮಾಡಿದ್ದಾರೆ. ಬನಾವಸಿಯ ಅನಾನಸ್ ನ್ನು ರಾಷ್ಟ್ರ ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಇವರದು. ಕೃಷಿಯಲ್ಲಿ ಹೊಸ ತಂತ್ರಜ್ಞಾನ, ಹಾಗೂ ಆವಿಷ್ಕಾರ ಅಳವಡಿಸುವ ಅಭಿರುಚಿ ಹೊಂದಿದ್ದ ಇವರು ಅನಾನಸ್ ಮತ್ತು ಬಾಳೆ ಕೃಷಿಯಲ್ಲಿ ವಿಶೇಷ ಪರಿಣಿತಿ ಸಾಧಿಸಿದ್ದರು. ಅಲ್ಲದೇ ತಮ್ಮ ಸುತ್ತಮುತ್ತಲಿನ ಕೃಷಿಕರಿಗೆ ಉತ್ತಮ ಮಾರ್ಗದರ್ಶನವನ್ನೂ ನೀಡುತ್ತಿದ್ದರು.

ಅಬ್ದುಲ್‍ರವೂಫ್ ಅವರಿಗೆ ಡಾ. ಎಮ್.ಎಚ್.ಮರಿಗೌಡ ಪ್ರಗತಿ ಪರತೋಟಗಾರಿಕಾ ಕೃಷಿ ಪ್ರಶಸ್ತಿ, ಶ್ರೀ ಶಿವಮೂರ್ತಿ ಮುರಘರಾಜೇಂದ್ರ ಸ್ವಾಮೀಜಿ ಮುರಘಾಮಠ ಅವರು ನೀಡಿದ ‘ಕಾಯಕರತ್ನ’ ಅಲ್ಲದೇ 2012 ರಲ್ಲಿ ವಿ. ಆರ್. ದೇಶಪಾಂಡೆ ಮೆಮೊರಿಯಲ್ ಟ್ರಸ್ಟ್ "ಜೀವಮಾನ ಸಾಧನೆ" ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಅವರ ನಿಧನಕ್ಕೆ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News