ಕೆಲಸ ಇಲ್ಲದ ಚಿಂತೆ: ಯುವಕ ಆತ್ಮಹತ್ಯೆ

Update: 2020-10-17 15:56 GMT

ಬ್ರಹ್ಮಾವರ, ಅ.17: ಕೆಲಸ ಸಿಗದ ಚಿಂತೆಯಲ್ಲಿ ಯುವಕನೋರ್ವ ಜೀವನ ದಲ್ಲಿ ಜಿಗುಪ್ಸೆಗೊಂಡು ಸೇತುವೆಯಿಂದ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾರ್ಕೂರು ಸಮೀಪ ನಡೆದಿದೆ.

ಮೃತರನ್ನು ಹೇರೂರು ಗ್ರಾಮದ ಹೇರೆಂಜೆ ಈಶ್ವರನಗರದ ದಾಮೋದರ ದೇಶ್ ಭಂಡಾರಿ ಎಂಬವರ ಮಗ ಗೌತಮ್(21) ಎಂದು ಗುರುತಿಸ ಲಾಗಿದೆ. ಪೈಂಟಿಂಗ್ ಕೆಲಸ ಮಾಡಿಕೊಂಡಿದ್ದ ಇವರು, ಅ.15ರಂದು ಕೆಲಸಕ್ಕೆ ಹೋಗಿದ್ದರು. ರಾತ್ರಿ ಕರೆ ಮಾಡಿ ವಾರಂಬಳ್ಳಿಯ ಐದು ಸೆಂಟ್ಸ್‌ ನಲ್ಲಿ ಐಪಿಎಲ್ ಕ್ರಿಕೆಟ್  ನೋಡುತ್ತಿರುವುದಾಗಿ ತಿಳಿಸಿದ್ದನು.

ರಾತ್ರಿಯಾದರೂ ಮನೆಗೆ ಬಾರದೆ ನಾಪತ್ತೆಯಾಗಿದ್ದ ಗೌತಮ್‌ನನ್ನು ಹುಡು ಕಾಡಿದಾಗ ಅ.16ರಂದು ಬಾರ್ಕೂರು ಸೇತುವೆ ಮೇಲೆ ಆತನ ಬೈಕ್, ಕೀ ಸಮೇತ, ಹೆಲ್ಮೆಟ್, ಜಾಕೆಟ್ ಪತ್ತೆಯಾಗಿತ್ತು. ಬಳಿಕ ಹುಡುಕಾಡಿದಾಗ ಆತನ ಮೃತದೇಹವು ಅ.17ರಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಬಾರ್ಕೂರು ಹಂದಾಡಿ ಮರ್ಬು ಹೊಳೆಯ ನೀರಿನಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News