ಸೆಕ್ಯೂರಿಟಿ ಗಾರ್ಡ್ ಆತ್ಮಹತ್ಯೆ

Update: 2020-10-17 16:00 GMT

ಪಡುಬಿದ್ರಿ, ಅ.17: ಲಾಕ್‌ಡೌನ್ ನಂತರ ಕೆಲಸವಿಲ್ಲದೇ ಕಳೆದ ಒಂದು ತಿಂಗಳಿನಿಂದ ಎಲ್ಲೂರಿನ ಯುಪಿಸಿಎಲ್ ಕಂಪನಿಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಿಕೊಂಡಿದ್ದ ಪಲಿಮಾರು ಮಣ್ಣೋಣಿ ನಿವಾಸಿ ದೀಪಕ್ ದೇವಾಡಿಗ(30) ಎಂಬವರು ಸೆ.16ರಂದು ಮಧ್ಯಾಹ್ನ ಮನೆಯ ಕೋಣೆಯ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News