ಕಂಟೆನರ್‌ನಲ್ಲಿ‌ ಗೋಮಾಂಸ ಸಾಗಾಟ ಆರೋಪ: ಇಬ್ಬರು ವಶಕ್ಕೆ

Update: 2020-10-18 04:07 GMT

ಮಂಗಳೂರು, ಅ.18: ಹುಬ್ಬಳ್ಳಿಯಿಂದ ಮಂಗಳೂರಿಗೆ ಬರುತ್ತಿದ್ದ ಕಂಟೆನರ್‌ನಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಕಂಕನಾಡಿ ಪೊಲೀಸರು ಇಬ್ನರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇಂದು ಮುಂಜಾನೆ ನಗರದ ಪಡೀಲ್ ಬಳಿ ಈ ವಾಹನವನ್ನು ತಡೆದ ಪೊಲೀಸರು ಗೋಮಾಂಸ ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

ಈ ವಾಹನದಲ್ಲಿ ಮೀನು‌ ತುಂಬಿಸುವ ಬಾಕ್ಸ್ ಗಳನ್ನು ಸೇರಿಸಿಟ್ಟು ಅದರ ಮಧ್ಯೆ ಗೋಮಾಂಸ ತುಂಬಿಸಿಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕಂಕನಾಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News